ಪುತ್ತೂರು: ಆ ಕಾಂಪ್ಲೆಕ್ಸ್ನಲ್ಲಿ 15 ಕ್ಕೂ ಅಧಿಕ ಬಾಡಿಗೆ ಕೋಣೆ ಇದೆ. ಅದರಲ್ಲಿ ಕಟ್ಟಡ ಮಾಲೀಕನಿಗೆಂದೇ ಕೋಣೆ. ಆ ಕೋಣೆಗೆ ಪ್ರತೀ ಭಾನುವಾರ ಮಾಲೀಕನ ಆಗಮನ. ಚಪಲ ಚೆನ್ನಿಗರಾಯನ ಕೋಣೆಯನ್ನು ಪರೀಕ್ಷಿಸಿದ ಮೂರು ಸ್ನೇಹಿತರು. ಜೊಲ್ಲು ಸ್ವಭಾವದ ವ್ಯಕ್ತಿ ಈ ಕಟ್ಟಡ ಮಾಲೀಕನ ಕೋಪಕ್ಕೆ ತುತ್ತಾಗಿ ಮೂವರನ್ನು ಕೋಣೆ ಖಾಲಿ ಮಾಡುವಂತೆ ಒತ್ತಾಯಿಸಿದ್ದಾನೆ.
ಇದನ್ನೂ ಓದಿ: ಶೂಟೌಟ್ ಪ್ರಕರಣ; ಆರೋಪಿಗಳ ಪತ್ತೆ ಮಾಹಿತಿ ನೀಡಿದ್ದಲ್ಲಿ 5 ಲಕ್ಷ ನಗದು ಬಹುಮಾನ
ಪುತ್ತೂರಿನ ಕೆದಂಬಾಡಿ ಗ್ರಾಮದಲ್ಲಿ ಒಂದು ಬಾಡಿಗೆ ಕಾಂಪ್ಲೆಕ್ಸ್ ಇದೆ. ಕಟ್ಟಡ ಮಾಲಿಕನಿಗೆ ಆಂಟಿಯರೆಂದರೆ ಒಂಥರಾ ಹುಚ್ಚು ಎಂಬ ಪಿಸುಪಿಸು ಮಾತು. ಈತನ ಕಟ್ಟಡದಲ್ಲಿ ಒಂದು ಮಹಿಳೆ ಕೋಣೆಯೂ ಇದೆ. ಕೆಲಸವಿಲ್ಲದಿದ್ದರೂ ಈ ಮಹಿಳೆಯ ಕೋಣೆಗೆ ಕಟ್ಟಡ ಮಾಲಿಕ ಭೇಟಿ ಕೊಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಮಾಲಿಕ ಯಾಕೆ ಭಾನುವಾರ ಮಾತ್ರ ಮಧ್ಯಾಹ್ನದ ವೇಳೆ ಬರುತ್ತಾನೆ ಎಂಬ ಸಂಶಯ ಈ ಕಾಂಪ್ಲೆಕ್ಸ್ ನ ಹಲವಾರು ಮಂದಿಗೆ ಇತ್ತು.
ಇದನ್ನು ಪತ್ತೆ ಹಚ್ಚಬೇಕೆಂದು ಕಟ್ಟಡದಲ್ಲಿ ಮೂವರು ಸ್ನೇಹಿತರು ಹೊಂಚು ಹಾಕಿದ್ದಾರೆ. ಕಟ್ಟಡ ಮಾಲಿಕ ಆಂಟಿಯ ಕೋಣೆಗೆ ಹೋಗಿದ್ದೇ ತಡ ಮೂವರು ಅಲ್ಲಿ ಏನಾಗುತ್ತಿದೆ ಎಂದು ಇಣುಕಿ ನೋಡಿದ್ದಾರೆ. ಇದು ಮಾಲಿಕನ ಗಮನಕ್ಕೆ ಬಂದಿದೆ. ತಕ್ಷಣ ತನ್ನ ಬಣ್ಣ ಬಯಲಾಗುತ್ತದೆ ಎಂದು ಭಯಗೊಂಡ ಕಟ್ಟಡ ಮಾಲಿಕ ಏನೂ ಗೊತ್ತಿಲ್ಲದಂತೆ ಹೊರಗಡೆ ಬಂದಿದ್ದಾನೆ. ಕೆಲವೇ ಹೊತ್ತಿನಲ್ಲಿ ಈ ವಿಚಾರ ವಾಟ್ಸಾಪ್ನಲ್ಲಿ ಹರಿದಾಡತೊಡಗಿದೆ. ಸಿಟ್ಟಾದ ಕಟ್ಟಡ ಮಾಲಿಕ ಇಣುಕಿ ನೋಡಿದ ಮೂವರನ್ನೂ ಕೋಣೆ ಖಾಲಿ ಮಾಡಿ ಇಲ್ಲಿಂದ ಜಾಗ ಬಿಡುವಂತೆ ಒಂದು ತಿಂಗಳ ಗಡು ವಿಧಿಸಿದ್ದಾನೆ.
ಇದನ್ನೂ ಓದಿ: ಹೆತ್ತಮ್ಮನಿಗೆ ಭಾರವಾದ ಕಂದಮ್ಮ; ಹೆತ್ತು 2 ದಿನದಲ್ಲಿ ರಸ್ತೆಯಲ್ಲಿ ಬಿಟ್ಟು ಹೋದರು..!
ಈ ವಿಚಾರ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೋಣೆಯಿಂದ ಖಾಲಿ ಮಾಡಿಸುವಷ್ಟು ದ್ವೇಷ ಯಾಕೆ? ಮೂವರು ಇಣುಕಿ ನೋಡಿದ ವೇಳೆ ಕಟ್ಟಡದೊಳಗೆ ಏನು ನಡೆಯುತ್ತಿತ್ತು ಎಂಬುದನ್ನು ಪೊಲೀಸರು ತನಿಖೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ. ಅನೈತಿಕ ವ್ಯವಹಾರ ನಡೆಯುತ್ತಿದ್ದರೆ ಅದರ ಬಗ್ಗೆ ಪೊಲೀಸರು ನಿಗಾವಹಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.