- Advertisement -
- Advertisement -
ಪುತ್ತೂರು: ನರಿಮೊಗರು ಗ್ರಾಮದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿ ವೈ ಎಫ್ ಐ)ನ ನೂತನ ಘಟಕವನ್ನು ರಚಿಸಲಾಯಿತು. ಮುಕ್ವೆ ಮಿನಿ ಹಾಲ್ ನಲ್ಲಿ ನಡೆದ ಘಟಕ ರೂಪೀಕರಣ ಸಭೆಯ
ಅಧ್ಯಕ್ಷತೆಯನ್ನು ಸ್ಥಳೀಯ ಯುವಜನ ಮುಂದಾಳು ಬಾರಿಕ್ ಮುಕ್ವೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಡಿ ವೈ ಎಫ್ ಐ ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮುಖಂಡರಾದ ರಿಯಾಝ್ ಮಾಂತೂರು, ಡಿ ವೈ ಎಫ್ ಐ ನ ಉಳ್ಳಾಲ ವಲಯ ಸಮಿತಿ ಅಧ್ಯಕ್ಷರಾದ ಅಶ್ರಫ್ ಕೆ.ಸಿ ರೋಡ್ ಪಾಲ್ಗೊಂಡರು.
ಸಮಿತಿಯ ನೂತನ ಅಧ್ಯಕ್ಷರಾಗಿ ಬಾರಿಕ್ ಮುಕ್ವೆ ಕಾರ್ಯದರ್ಶಿಯಾಗಿ ಮೋಹಿಯುದ್ದೀನ್ ಸಫ್ವಾನ್ ಮುಕ್ವೆ, ಉಪಾಧ್ಯಕ್ಷರಾಗಿ ಶರೀಫ್ ಕುದುಕೊಲಿ ಮತ್ತು ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿಯಾಗಿ ಜಾವದ್ ಹಾಗೂ ಸಾದಿಕ್ ಪುರುಷರ ಕಟ್ಟೆ, ಕೋಶಾಧಿಕಾರಿಯಾಗಿ ಮೊಹಮ್ಮದ್ ಪಟ್ಬಾಂಬಿ ಆಯ್ಕೆಯಾದರು.
- Advertisement -