- Advertisement -
- Advertisement -
ಪುತ್ತೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಾಣಿಯೂರು ಸಮೀಪ ನಡೆದಿದೆ. ಮೃತರನ್ನು ಕಾಯ್ಮಣ ಗ್ರಾಮದ ಮಜಲಡ್ಡ ನಿವಾಸಿ ಗಂಗಾಧರ (40) ಎನ್ನಲಾಗಿದೆ.
ಗಂಗಾಧರ ಅವರು ನಡೆದುಕೊಂಡು ಹೋಗುತ್ತಿದ್ದಾಗ ಮಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ತಕ್ಷಣ ಅವರನ್ನು ಸ್ಥಳೀಯರ ಸಹಾಯದಿಂದ ಪುತ್ತೂರು ಆಸ್ಪತ್ರೆಗೆ ತರಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪ ತ್ರೆಯಲ್ಲಿ ಮೃತಪಟ್ಟಿ ದ್ದಾರೆ.
ಮೃತರು ತಾಯಿ ಲಲಿತಾ, ಸಹೋದರ ದಯಾನಂದ, ಸಹೋದರಿ ಮಮತಾ ಅವರನ್ನು ಅಗಳಿದ್ದಾರೆ. ರೈಲ್ವೇ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.
- Advertisement -