Friday, July 24, 2026
spot_imgspot_img
spot_imgspot_img

ಪುತ್ತೂರು: ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಆಶ್ರಯದಲ್ಲಿ ಸೈನಿಕ ಕಲ್ಯಾಣ ನಿಧಿ ವಿತರಣಾ ಕಾರ್ಯಕ್ರಮ

- Advertisement -
- Advertisement -

ಪುತ್ತೂರು: ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಆಶ್ರಯದಲ್ಲಿ ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣಾ ಕಾರ್ಯಕ್ರಮ ಬಪ್ಪಳಿಗೆ ಬಳಿಯ ಸೈನಿಕ ಭವನ ಇದರ ಸಭಾಂಗಣದಲ್ಲಿ ಆ.6 ರಂದು ನಡೆಯಿತು.

ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈನಿಕ ಕುಟುಂಬದ ಸದಸ್ಯರಿಗೆ ಸಹಾಯಧನ ವಿತರಣೆ ನಡೆಯಿತು. ಕಳೆದ ಹತ್ತು ವರುಷದಲ್ಲಿ 37 ಲಕ್ಷ ರೂಪಾಯಿಗನ್ನು ಅರ್ಹ ಸೈನಿಕ ಕುಟುಂಬದ ಸದಸ್ಯರಿಗೆ ಸಂಘಟನೆಯಿಂದ ವಿತರಣೆ ಮಾಡಲಾಗಿದೆ.

ಕಾರ್ಯಕ್ರದಲ್ಲಿ ಪುತ್ತೂರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ ಕುಮಾರ್ ಹಾಗೂ ಪದಾಧಿಕಾರಿಗಳು, ರಾಷ್ಟ್ರಭಕ್ತ ನಾಗರಿಕ ವೇದಿಕೆಯಯ ಉಪಾಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಗೌರವಾಧ್ಯಕ್ಷರಾದ ಎಂ.ಕೆ.ನಾರಯಣ ಭಟ್, ಕಾರ್ಯದರ್ಶಿ ನಸಿಂಹ ಭಂಡಾರಿ, ಟ್ರಸ್ಟ್ ಅಧ್ಯಕ್ಷ ಜೋ ಡಿ ಸೋಜಾ, ಉದ್ಯಮಿ ಧನಂಜಯ ಪಟ್ಟ, ಅವಿನಾಶ್ ಸಹಿತ ಮಾಜಿ ಸೈನಿಕರ ಸಂಘದ ಸದಸ್ಯರು, ರಾಷ್ಟ್ರ ಭಕ್ತ ನಾಗರಿಕ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ದೇಶಭಕ್ತರು ಹಾಜರಿದ್ದರು.

- Advertisement -

Related news

error: Content is protected !!