- Advertisement -
- Advertisement -
ಪುತ್ತೂರು: ಇಂಗು ಗುಂಡಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಜು.26ರಂದು ಪಡುವನ್ನೂರು ಗ್ರಾಮದಲ್ಲಿ ನಡೆದಿದೆ. ಪಡುವನ್ನೂರು ಗ್ರಾಮದ ಗುರಿಯಡ್ಕ ನಿವಾಸಿ ಐತ್ತಪ್ಪ ಮೂಲ್ಯ ಎಂಬವರು ಮೃತಪಟ್ಟವರು.
ಐತ್ತಪ್ಪ ಮೂಲ್ಯರವರು ಸುಮಾರು 1 ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಈ ಬಗ್ಗೆ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೇ ಇದ್ದು ಮನಸ್ಸಿನಲ್ಲಿ ನೊಂದುಕೊಂಡು ಆಗಾಗ ರಾತ್ರಿ ಸಮಯದಲ್ಲಿ ಯಾರಿಗೂ ಹೇಳದ ಎದ್ದು ಹೊರಗಡೆ ಹೋಗುತ್ತಿದ್ದರು. ಜು.23ರಂದು ರಾತ್ರಿ ಊಟ ಮಾಡಿ ಮಲಗಿದವರು ಜು.24ರಂದು ಬೆಳಿಗ್ಗೆ, ಅವರು ನಾಪತ್ತೆಯಾಗಿದ್ದರು.
ಜು.26ರಂದು ಅವರ ಮೃತ ದೇಹ ನೆರೆಮನೆಯ ಶೀನಗೌಡ ಮಾಪಳರವರ ಮನೆಯ ಹತ್ತಿರದ ಇಂಗು ಗುಂಡಿಯಲ್ಲಿ ಪತ್ತೆಯಾಗಿದೆ. ಐತ್ತಪ್ಪ ಮೂಲ್ಯ ಅವರು ಮಾನಸಿಕ ಖಿನ್ನತೆಗೆ ಒಳಗಾಗಿ ರಾತ್ರಿ ಸಮಯ ಎದ್ದು ಹೋಗಿದ್ದವರು ಆಕಸ್ಮಿಕವಾಗಿ ಜಾರಿ ಇಂಗು ಗುಂಡಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಮೃತರ ಪುತ್ರ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದೆ.
- Advertisement -