- Advertisement -
- Advertisement -
ಪುತ್ತೂರು: ಕೊಳ್ತಿಗೆ ಗ್ರಾಮದ ಕೆಮ್ಮತಕಾನದಲ್ಲಿ ಅವಿವಾಹಿತ ಯುವತಿಯೋರ್ವಳು ಕೊರೋನಾಗೆ ಬಲಿಯಾದ ಘಟನೆ ವರದಿಯಾಗಿದೆ.
ಪೆರ್ಲಂಪಾಡಿ ಕೆಮ್ಮತಕಾನ ಹುಕ್ರಪ್ಪ ಮತ್ತು ಜಾನಕಿಯವರ ಪುತ್ರಿ ಪುಷ್ಪಾವತಿ (24) ಮೃತ ದುರ್ದೈವಿ.
ಇವರು ಕೆಲ ದಿನಗಳ ಹಿಂದೆ ಅನಾರೋಗ್ಯದಿಂದಿದ್ದರು. ಚಿಕಿತ್ಸೆಗಾಗಿ ಜೂ. 23 ರಂದು ಪೆರ್ಲಂಪಾಡಿ ಆಸ್ಪತ್ರೆಗೆ ಕೆರೆದೊಯ್ದರು ಆದರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕರೆತಂದು, ಪುತ್ತೂರಿನಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎನ್ನಲಾಗಿದೆ. ಮೃತರು ಸಹೋದರಿ ಸೀತಾರವರನ್ನು ಅಗಲಿದ್ದಾರೆ.
ಜೂ.24ರಂದು ಹಿಂದೂ ಜಾಗರಣ ವೇದಿಕೆಯ ಆಂಬುಲೆನ್ಸ್ ಮೂಲಕ ಮೃತದೇಹವನ್ನು ಕೆಮ್ಮತಕಾನಕ್ಕೆ ತಂದಿದ್ದಾರೆ. ಮನೆಯವರ ಜೊತೆ ಸೇರಿ ಅಂತ್ಯ ಸಂಸ್ಕಾರದಲ್ಲೂ ಕೈ ಜೋಡಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
- Advertisement -