Monday, April 29, 2024
spot_imgspot_img
spot_imgspot_img

ಪುತ್ತೂರು ನಗರಸಭೆ ಉಪಚುನಾವಣೆ ಫಲಿತಾಂಶ; ಪಕ್ಷಕ್ಕೆ ಯಾರು ಡ್ಯಾಮೇಜ್ ಮಾಡುತ್ತಾರೋ ಅವರನ್ನು ಒದ್ದು ಹೊರಗೆ ಹಾಕುವುದು ಒಳ್ಳೆಯದು – ರಾಜೇಶ್ ಬನ್ನೂರು

- Advertisement -G L Acharya panikkar
- Advertisement -

ಪುತ್ತೂರು ನಗರಸಭೆ ವ್ಯಾಪ್ತಿಯ ಎರಡು ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ನೆಲ್ಲಿಕಟ್ಟೆ ವಾರ್ಡ್‌‌ನಲ್ಲಿ ಬಿಜೆಪಿ ಬಹುಮತದೊಂದಿಗೆ ವಿಜಯ ಪತಾಕೆ ಹಾರಿಸಿದೆ. ರಕ್ತೇಶ್ವರಿ ವಾರ್ಡ್‌‌ನಲ್ಲಿ ಕೆಲವು ಮತಗಳ ಅಂತರದಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಪಕ್ಷ ಗೆದ್ದಿದೆ.

ನಗರಸಭೆಯ ಮಾಜಿ ಅಧ್ಯಕ್ಷ ರಾಜೇಶ್‌ ಬನ್ನೂರು ಮಾತನಾಡಿ ’ಎರಡು ವಾರ್ಡ್‌‌ನಲ್ಲಿ ಸಹಕರಿಸಿದ ಕಾರ್ಯಕರ್ತರಿಗೆ ಮತ್ತು ಮತದಾನ ಬಂಧುಗಳಿಗೆ ಅಭಿನಂದನೆ ಸಲ್ಲಿಸಿದರು. ಭಾರತೀಯ ಜನತಾ ಪಾರ್ಟಿ ಯಾವುದೇ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿ ಅಲ್ಲ, ಹಿರಿಯ ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಾರ್ಟಿಯಾಗಿದೆ. ಈ ಪಕ್ಷಕ್ಕೆ ಡ್ಯಾಮೇಜ್ ಆಗುವಂತೆ ಕೆಲವು ವ್ಯಕ್ತಿಗಳು ನಾವು ಮಾಡಿದ್ದು ನಾವು ಮಾಡಿದ್ದು ಎಂದು ಹೇಳುತ್ತಿದ್ದು ಅವರು ಯಾರೂ ಇದನ್ನು ಮಾಡಿಲ್ಲ. ಹಿರಿಯ ಕಾರ್ಯಕರ್ತರು ಕಟ್ಟಿ ಬೆಳೆಸಿದ ಈ ಪಕ್ಷವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ.

ಈ ಪಕ್ಷಕ್ಕೆ ಯಾರು ಡ್ಯಾಮೇಜ್ ಮಾಡಿದ್ದಾರೋ ಮಾಡುತ್ತಾರೋ ಅವರನ್ನು ಒದ್ದು ಹೊರಗೆ ಹಾಕುವುದು ಒಳ್ಳೆಯದು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಯಾವುದೇ ಬಿಜೆಪಿ ಪಕ್ಷದ ಅಭಿಪ್ರಾಯ ಅಲ್ಲ’ ಎಂದು ಹೇಳಿದರು.

- Advertisement -

Related news

error: Content is protected !!