Sunday, June 29, 2025
spot_imgspot_img
spot_imgspot_img

ಪ್ಲೇ-ಆಫ್‌ಗೆ ಆರ್‌ಸಿಬಿ ಗ್ರ್ಯಾಂಡ್​ ಎಂಟ್ರಿ!

- Advertisement -
- Advertisement -

ಪ್ಲೇ-ಆಫ್‌ ಪ್ರವೇಶ ಕಾರಣಕ್ಕೆ ಕೊನೆ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದ ಬೆಂಗಳೂರು ತಂಡವು ರಾಯಲ್‌ ಆಗಿ ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿದೆ.

ಐಪಿಎಲ್ 2024 ರ 68 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿದೆ. ಒಂದು ವೇಳೆ ಪಂದ್ಯ ಸೋತು 201 ರನ್‌ ಗಳಿಸಿದ್ದರೂ ಚೆನ್ನೈ ಪ್ಲೇ-ಆಫ್‌ ಪ್ರವೇಶಿಸಲು ಸಾಧ್ಯವಾಗುತ್ತಿತ್ತು. ಆದರೆ ಆರ್‌ಸಿಬಿ ಬೌಲರ್‌ಗಳ ಉತ್ತಮ ಪ್ರದರ್ಶನದಿಂದ ಚೆನ್ನೈ ಪ್ಲೇ-ಆಫ್‌ ಕನಸಿಗೂ ತಣ್ಣೀರು ಬಿದ್ದಿತು. ಕೇವಲ 10 ರನ್‌ಗಳ ಅಂತರದಲ್ಲಿ ಗಾಯಕ್‌ವಾಡ್‌ ಪಡೆ ಪ್ಲೇ-ಆಫ್‌ನಿಂದ ಮುಗ್ಗರಿಸಿತು.

ಬೆಂಗಳೂರು ತಂಡ ನೀಡಿದ್ದ 219 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿ ಪಂದ್ಯ ಸೋತು ಪ್ಲೇ-ಆಫ್‌ನಿಂದ ಹೊರಬಿದ್ದಿತು.

ಪಂದ್ಯದ ಪ್ರತೀ ಹಂತದಲ್ಲೂ ಗೆಲುವು ಅತ್ತ-ಇತ್ತ ಚಲಿಸುತ್ತಿತ್ತು. ಅಂತಿಮ ಹಂತದವರೆಗೂ ಚೆನ್ನೈ ತಂಡವೇ ಗೆಲ್ಲುವ ಫೇವರಿಟ್ ಆಗಿತ್ತು. ಆದರೆ ಯಶ್ ದಯಾಳ್ ಎಸೆದೆ ಅಂತಿಮ ಓವರ್ ಚೆನ್ನೈ ಕೈಯಿಂದ ಗೆಲುವು ಕಸಿದು ಆರ್ ಸಿಬಿಗೆ ನೀಡಿತು.

ಹಂತದಲ್ಲಿ ಚೆನ್ನೈಗೆ ಪ್ಲೇ ಆಫ್ ಗೆ ಅರ್ಹತೆ ಗಿಟ್ಟಿಸಲು 17 ರನ್ ಗಳ ಅವಶ್ಯತೆ ಇತ್ತು. ಈ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ಕ್ರೀಸ್ ನಲ್ಲಿದ್ದರು. ಮೊದಲ ಎಸೆತ ಎದುರಿಸಿದ ಧೋನಿ, ಯಶ್ ದಯಾಳ್ ಎಸೆದ ಮೊದಲ ಎಸೆತವನ್ನೇ ಫೈನ್ ಲೆಗ್ ನತ್ತ ಭಾರಿಸಿ ಸಿಕ್ಸರ್ ಗಿಟ್ಟಿಸಿದರು. ಈ ಹಂತದಲ್ಲಿ ಚೆನ್ನೈ ಗೆಲುವು ಪಕ್ಕಾ ಎಂಬಂತಾಗಿತ್ತು. ಆದರೆ ಮುಂದಿನ ಎಸೆತದಲ್ಲೇ ಮ್ಯಾಜಿಕ್ ಮಾಡಿದ ಯಶ್ ದಯಾಳ್ ಧೋನಿ ವಿಕೆಟ್ ಪಡೆದರು. ಯಶ್ ಎಸೆದ 2ನೇ ಎಸೆತವನ್ನು ಡೀಪ್ ಬ್ಯಾಕ್ವರ್ಡ್ ಸ್ಟೋರ್ ನತ್ತ ಸ್ಟೈಪ್ ಮಾಡಲು ಹೋದ ಧೋನಿ ಸ್ಟಪ್ಟಿಲ್ ಸಿಂಗ್ ಕ್ಯಾಚ್ ನೀಡಿ ಔಟಾದರು. ಬಳಿಕ ನಡೆದದ್ದೇ ಮ್ಯಾಜಿಕ್. ಧೋನಿ ಔಟಾಗುತ್ತಿದ್ದಂತೆಯೇ ಆರ್ ಸಿಬಿ ಪಾಳಯದಲ್ಲಿ ಗೆಲುವಿವ ಆಸೆಯ ಚಿಗುರೊಡೆಯಿತು. ಅದಕ್ಕೆ ಇಂಬು ನೀಡುವಂತೆ ಯಶ್ ಕೂಡ ಮೂರನೇ ಎಸೆತವನ್ನು ಕರಾರುವಕ್ಕಾಗಿ ಮಾಡಿದರು. ಧೋನಿ ಬಳಿಕ ಕ್ರೀಸ್ ಗೆ ಬಂದ ಶಾರ್ದುಲ್ ಠಾಕೂರ್ 3ನೇ ಎಸೆತದಲ್ಲಿ ರನ್ ಗಳಿಸುವಲ್ಲಿ ವಿಫಲರಾದರು. 4ನೇ ಎಸೆತದಲ್ಲಿ ಯಶ್ ದಯಾಳ್ ಎಸೆತ ಸ್ತೋ ಎಸೆತದಲ್ಲಿ ಸಿಂಗಲ್ ರನ್ ಪಡೆದು ರವೀಂದ್ರ ಜಡೇಜಾಗೆ ಅವಕಾಶ ಮಾಡಿಕೊಟ್ಟರು.

ಆದರೆ ಅಚ್ಚರಿ ಎಂದರೆ 22 ಎಸೆತಗಳಲ್ಲಿ 3 ಸಿಕ್ಸ‌ರ್ ಮತ್ತು 3 ಬೌಂಡರಿ ನೆರವಿನಿಂದ 42ರನ್ ಚಚ್ಚಿದ್ದ ಜಡೇಜಾ ಕೂಡ ನಿರ್ಣಾಯಕ 5ನೇ ಎಸೆತದಲ್ಲಿ ರನ್ ಗಳಿಸುವಲ್ಲಿ ವಿಫಲರಾದರು. ಈ ಹಂತದಲ್ಲಿ ಆರ್ ಸಿಬಿ ಗೆಲುವು ಪಕ್ಕಾ ಆಗಿತ್ತು. ಅಂತಿಮ ಎಸೆತವನ್ನೂ ಯಶ್ ದಯಾಳ್ ರನ್ ನೀಡದೆ ಆರ್ ಸಿಬಿ ಗೆ ವಿರೋಚಿತ ಗೆಲುವು ತಂದು ಕೊಟ್ಟರು.ಮೊದಲ ಎಸೆತದಲ್ಲಿ ಸಿಕ್ಸರ್ ನೀಡಿ ಆರ್ ಸಿಬಿ ಅಭಿಮಾನಿಗಳ ಪಾಲಿಗೆ ವಿಲ್ಲನ್ ಆಗಿದ್ದ ಯಶ್ ದಯಾಳ್ ಅಂತಿಮ ಎಸೆತದ ಹೊತ್ತಿಗೆ ಹೀರೋ ಆಗಿದ್ದರು.

- Advertisement -

Related news

error: Content is protected !!