Friday, March 29, 2024
spot_imgspot_img
spot_imgspot_img

ಕಾವೂರಿನಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರಕ್ಕೆ ಗುದ್ದಲಿ ಪೂಜೆ!!

- Advertisement -G L Acharya panikkar
- Advertisement -

ಮಂಗಳೂರು,ಅ.14(ಹಿ.ಸ): ಮಂಗಳೂರು ಹೊರವಲಯದ ಕಾವೂರಿನಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ, ಶಾಸಕ ಡಾ.ವೈ.ಭರತ್ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.


ಬಳಿಕ ಮಾತನಾಡಿದ ಅವರು ಈ ಹಿಂದೆ ಮಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರ ರಚನೆಗೆ ಪ್ರಯತ್ನ ನಡೆದಿದ್ದು ಕಾರಣಾಂತರಗಳಿಂದ ಸಾಧ್ಯವಾಗಿಲ್ಲ.ವಿಶ್ವ ವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ಅವರು ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಅನುಮತಿ ನೀಡಿ ಸಹಕಾರ ನೀಡಿದ್ದಾರೆ. ಇದೀಗ ಮೇರಿಹಿಲ್ ನಲ್ಲಿ ಸೂಕ್ತ ಜಾಗವನ್ನು ಸರಕಾರದ ನಿರ್ದೇಶನದೊಂದಿಗೆ ಜಿಲ್ಲಾಧಿಕಾರಿ ಒದಗಿಸಿದ್ದಾರೆ ಎಂದರು.

ಪ್ರಾದೇಶಿಕ ಕೇಂದ್ರದಿಂದ ಸ್ಥಳೀಯ ದ.ಕ,ಉಡುಪಿ,ಉತ್ತರಕನ್ನಡ ಚಿಕ್ಕಮಗಳೂರು,ಕೊಡಗು ವೈದ್ಯಕೀಯ,ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.

- Advertisement -

Related news

error: Content is protected !!