- Advertisement -
- Advertisement -
ಮಂಗಳೂರು: ಮಂಗಳೂರು ಬಿಕರ್ನಕಟ್ಟೆ ಫ್ಲೈ ಓವರ್ ನಿಂದ ಪಡೀಲ್ ನತ್ತ ಆಗಮಿಸುತ್ತಿದ್ದ ವೇಳೆ ಅಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಹಲವಾರು ವರ್ಷದಿಂದ ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಗುದ್ದಿದ ಪರಿಣಾಮ ಅಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಆಟೋ ಚಾಲಕ ಸಲೀಮ್ ಕೊಲೆ ಆರೋಪಿಯಾಗಿದ್ದು, ಸಾಕ್ಷ್ಯಗಳಿಲ್ಲದೆ ಬಿಡುಗಡೆಗೊಂಡಿದ್ದ ಎನ್ನಲಾಗುತ್ತಿದೆ.
2004ರಲ್ಲಿ ನಾಗರಾಜ್ ಶೆಟ್ಟಿ ಅವರು ಶಾಸಕರಾದ ಮೇಲೆ ನಡೆದ ಹಿಂಸಾತ್ಮಕ ಕೋಮು ಗಲಭೆಯಲ್ಲಿ ಮತಾಂಧರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಕೊಲೆಯಾದ ಜಗದೀಶ ಪೂಜಾರಿ ವಳಚ್ಚಿಲ್ ಅವರ ಕೊಲೆಯ ಆರೋಪಿಗಳ ಪಟ್ಟಿಯಲ್ಲಿದ್ದ ಮೊದಲ ಆರೋಪಿಯೇ ಸಲೀಮ್. ಸಾಕ್ಷ್ಯಗಳ ಕೊರತೆಯಿಂದ ಅಂದು ಬಚಾವಾಗಿದ್ದ ಸಲೀಮ್ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಕೋಮು ಗಲಭೆಯ ಕೊಲೆ ಆರೋಪಿ.
- Advertisement -