- Advertisement -
- Advertisement -
ವಿಟ್ಲ: ಕಂಬಳಬೆಟ್ಟು – ಅಮೈ – ನೂಜಿ ರಸ್ತೆ ಕಾಂಕ್ರೀಟಿಕರಣಕ್ಕೆ ರೂ.10 ಲಕ್ಷ ಅನುದಾನ ಒದಗಿಸಿ ಶಿಲಾನ್ಯಾಸವನ್ನು ಶಾಸಕ ಸಂಜೀವ ಮಠಂದೂರು ನೇರವೇರಿಸಿದರು.
ಕಂಬಳಬೆಟ್ಟು, ಅಮೈ, ನೂಜಿ ಪರಿಸರದ ಜನರು ಹಲವು ವರ್ಷಗಳಿಂದ ರಸ್ತೆಗಾಗಿ ಬೇಡಿಕೆ ಸಲ್ಲಿಸಿದ್ದರು ಯಾವುದೇ ಅನುದಾನ ಒದಗಲಿಲ್ಲ. ಸದ್ಯ ಇಲ್ಲಿನ ಜನರ ಹಲವು ಸಮಸ್ಯೆಗಳನ್ನು ತಿಳಿದ ಶಾಸಕ ಸಂಜೀವ ಮಠಂದೂರು 10 ಲಕ್ಷ ಅನುದಾನ ಒದಗಿಸಿ ಶಿಲಾನ್ಯಾಸವನ್ನು ನೇರವೇರಿಸಿದ್ದಾರೆ. ಈ ಪರಿಸರಕ್ಕೆ ಇದುವೇ ಮೊದಲ ಅನುದಾನವಾದ ಕಾರಣ ಸ್ಥಳೀಯ ಜನರು ಸಂತೋಷ ವ್ಯಕ್ತಪಡಿಸಿದ್ದು, ಶಾಸಕರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸ್ಥಳೀಯ ಸಂಚಾಲಕರು, ಬೂತ್ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -