Sunday, April 28, 2024
spot_imgspot_img
spot_imgspot_img

ಆರ್.ಆರ್.ನಗರ, ಶಿರಾ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ: ನಳಿನ್​ ಕುಮಾರ್​ ಕಟೀಲ್

- Advertisement -G L Acharya panikkar
- Advertisement -

ಚಿಕ್ಕಮಗಳೂರು ಅ31: ಆರ್.ಆರ್.ನಗರ, ಶಿರಾ 2 ಕ್ಷೇತ್ರಗಳಲ್ಲಿ ಬಿಜೆಪಿ ಮೆಜಾರಿಟಿಯಲ್ಲಿ ಗೆಲ್ಲಲಿದೆ ಎಂದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಬಲ ಸ್ಪರ್ಧಿ, ಜೆಡಿಎಸ್ ಮೂರನೇ ಸ್ಥಾನದಲ್ಲಿದೆ. ಆರ್.ಆರ್.ನಗರ 50 ಸಾವಿರ, ಶಿರಾ 15-20 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ.

ಜಯಚಂದ್ರ 2 ಬಾರಿ ಗೆದ್ದರೂ ಕ್ಷೇತ್ರಕ್ಕೆ ಏನೂ ಮಾಡಿಲ್ಲ, ಆಶ್ವಾಸನೆಗಳನ್ನೂ ಈಡೇರಿಸಿಲ್ಲ. ಕುಮಾರಸ್ವಾಮಿ ಸರ್ಕಾರವಿದ್ದಾಗಲೂ ಕ್ಷೇತ್ರಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ. ಯಡಿಯೂರಪ್ಪ ಸಮಸ್ಯೆಗಳಿಗೆ ಉತ್ತರಿಸಿದ್ದಾರೆ, ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಿರುವುದು. ಜನರಿಗೆ ವಿಶ್ವಾಸ ಬಂದಿದೆ, ಚುನಾವಣೆಗೂ ಮುನ್ನವೇ ಬಿಜೆಪಿ ಮೊದಲ ಸ್ಥಾನಲ್ಲಿದೆ ಎಂದರು.

ನಮಗೆ 117 ಸ್ಥಾನವಿದೆ, ನಮಗೆ ಒಳಒಪ್ಪಂದ ಅವಶ್ಯಕತೆ ಇಲ್ಲ. ಒಳಒಪ್ಪಂದ ಮಾಡಿದರೆ ನಾವು ಗಟ್ಟಿಯಾಗಲ್ಲ, ವೀಕ್ ಆಗ್ತೀವಿ. ರಾಷ್ಟ್ರೀಯ ಪಾರ್ಟಿ ಏಕೆ ಒಳಒಪ್ಪಂದ ಮಾಡುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

- Advertisement -

Related news

error: Content is protected !!