- Advertisement -
- Advertisement -
ಬೆಂಗಳೂರು(ಅ.30): ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳ ಪ್ರಚಾರ ಜೋರಾಗಿ ಸಾಗಿದೆ. ಅಲ್ಲದೆ, ಈ ಉಪಚುನಾವಣೆ ಅಖಾಡಕ್ಕೆ ತಾರಾಮೆರಗು ಬಂದಿದೆ. ಆರ್.ಆರ್ ನಗರ ಕುರುಕ್ಷೇತ್ರ ಅಖಾಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ ಕೊಡಲಿದ್ದಾರೆ.
ಮುನಿರತ್ನ ಪರ ನಟಿ ಶ್ರುತಿ ಪ್ರಚಾರ ಮಾಡಿದ್ದರು. ಬಳಿಕ, ನಟಿ ಖುಷ್ಬೂ ಸುಂದರ್ ಕೂಡ ರೋಡ್ ಶೋ ಮೂಲಕ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಮುನಿರತ್ನ ಪರ ಮತಯಾಚನೆ ನಡೆಸಿದ್ದರು. ಇದೀಗ ನಟ ದರ್ಶನ್ ಕೂಡ ಮುನಿರತ್ನ ಪರವಾಗಿ ಇಂದು ರಾಜರಾಜೇಶ್ವರಿ ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ.
- Advertisement -