ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯ ನಡೆಸುತ್ತಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ರವರ ಬಗ್ಗೆ ವಾಟ್ಸಾಪ್ ಗ್ರೂಪ್ನಲ್ಲಿ ಅವಹೇಳನಕಾರಿ ಸಂದೇಶವನ್ನು ಹಾಕಿರುವ ಕುರಿತು ಅಶೋಕ್ ರೈ ಅಭಿಮಾನಿ ಬಳಗದ ವತಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನ ಮುಖಾಂತರ ಸಮಾಜದಲ್ಲಿ ಸಮಾಜದ ಬಡವರ ಕಷ್ಟಗಳಿಗೆ ಸ್ಪಂದಿಸಿ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.
ಆದರೆ ಅಶೋಕ್ ಕುಮಾರ್ ರೈ ಅವರು ಸಮಾಜದಲ್ಲಿ ಯಾವುದೇ ಕೆಲಸ ಮಾಡಿರುವುದಿಲ್ಲ ಎಂದು ಕಾಂಗ್ರೆಸ್ ಬೆಂಬಲಿಗರು ಎಂಬ ವಾಟ್ಸಪ್ ಗ್ರೂಪಿನಲ್ಲಿ ಮುರಳೀಧರ ನಾಯ್ಕ್ ಎಂಬವರು ಸಂದೇಶ ರವಾನೆ ಮಾಡುವ ಮೂಲಕ ಅಶೋಕ್ ರೈ ಅವರ ಹೆಸರನ್ನು ಸಮಾಜದಲ್ಲಿ ಹಾಳುಗೆಡುವ ಕೆಲಸ ಮಾಡಿದ್ದಾರೆ.
ಇದು ಅವರ ಅಭಿಮಾನಿಗಳಾದ ನಮಗೂ ನೋವಾಗಿದೆ. ಹಾಗಾಗಿ ಅವಹೇಳನಕಾರಿ ಸಂದೇಶ ವಾಟ್ಸಪ್ನಲ್ಲಿ ರವಾನೆ ಮಾಡಿದ ಮುರಳೀಧರ ನಾಯ್ಕ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ಮಾಡ ಬಯುಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದ ಪ್ರಜ್ವಲ್ ರೈ ಪಾತಾಜೆ, ಸಂತೋಷ್ ರೈ ಕೈಕಾರ, ಉದಯ ಬೆಳ್ಳಾರೆ, ಆರ್.ಕೆ.ಪುತ್ತೂರು, ಸುಜಿತ್ ಸಂಟ್ಯಾರ್, ಪ್ರಜನ್ ರೈ, ದೀಕ್ಷಿತ್ ರೈ, ಭರತ್ ಶೆಟ್ಟಿ, ತೀರ್ಥ ರೈ, ಪ್ರದೀಪ್ ರೈ, ನಿಶಾಂತ್ ರೈ, ಶರತ್, ಕಾರ್ತಿಕ್ ರೈ, ಮೋಹನ್ ಸವಣೂರು, ನಿತಿನ್, ಶ್ರೀನಿಧಿ, ಪ್ರದೀಪ್ ನಾಯರ್, ಪ್ರವೀಣ್, ಲಿಂಗಪ್ಪ ದೂರು ನೀಡುವ ಸಂದರ್ಭ ಉಪಸ್ಥಿತರಿದ್ದರು.