ವೀರಕಂಭ : ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಜಿ ವೀರಕಂಭದಲ್ಲಿ ಅರಣ್ಯ ಇಲಾಖೆ ಹಾಗೂ ಮಜಿ ಶಾಲೆಯ ಜಂಟಿ ಆಶ್ರಯದಲ್ಲಿ “ಮನೆಗೊಂದು ಮರ” ವಿಶೇಷ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಷಾಟಿಸಿ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ಶೋಭಿತ್ ರವರು , ಅರಣ್ಯ ದೇಶದ ಸಂಪತ್ತು ದೇಶವು ಆರೊಗ್ಯ ಯುತವಾಗಿ ಬೆಳೆಯುವಲ್ಲಿ ಅರಣ್ಯ ಗಳು ಬಹುಮುಖ್ಯವಾದ ಪಾತ್ರಹಿಸುತ್ತವೆ, ಒಂದು ಗಿಡವನ್ನು ಬೆಳೆಯುವ ವರೆಗೆ ನೋಡಿಕೊಂಡರೆ ಸಾಕು ಆಮೇಲೆ ಆ ಮರವೇ ನಮ್ಮನ್ನು ಬೆಳೆಸುತ್ತದೆ ಆರೋಗ್ಯಪೂರ್ಣ ಮಾಲಿನ್ಯರಹಿತ ಜೀವನ ಪಡೆಯಲು ಮರಗಳೇ ಮುಖ್ಯ ಸಾಧನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಕಂಭ ಗ್ರಾಮ ಅರಣ್ಯ ವಲಯ ಸಮಿತಿಯ ಅಧ್ಯಕ್ಷ ವಿಶ್ವನಾಥ್ ರವರು, ಶಾಲಾದಿನಗಳಲ್ಲಿ ಪರಿಸರದ ಕಾಳಜಿ ಬೆಳೆಸಿದಾಗ ಪರಿಸರ ಪ್ರಜ್ಞೆಯೂ ಬೆಳೆಯುತ್ತದೆ ಒಂದು ಮಗು ತನ್ನ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಂಡಾಗ ಮಾತ್ರ ಅದರ ಬಗ್ಗೆ ನಿಜವಾದ ಕಲಿಕೆ ಪಡೆಯಲು ಸಾಧ್ಯ ಎಂದರು. ವೇದಿಕೆಯಲ್ಲಿ ವೀರಕಂಭ ವಲಯ ಅರಣ್ಯ ಸಮಿತಿಯ ಸದಸ್ಯ ನೋಣಯ್ಯ , ಹಿರಿಯ ವಿಧ್ಯಾಥಿ೯ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರ, ಶಾಲಾನಾಯಕಿ ಮಾನಸರವರು ಉಪಸ್ಥಿತರಿದ್ದರು.
ಕಾಯ೯ಕ್ರಮದ ಬಳಿಕ ಶಾಲಾ ಆವರಣದಲ್ಲಿ ಕಹಿಬೇವಿನ ಗಿಡವನ್ನು ನೆಟ್ಟು ಎಲ್ಲಾ ಮಕ್ಕಳಿಗೆ ಶ್ರೀಗಂಧ, ಬಿಲ್ವಪತ್ರೆ, ಕಹಿಬೇವು, ರಕ್ತಚಂದನ, ಮುಂತಾದ ಗಿಡಗಳನ್ನು ವಿತರಿಸಿ ಪ್ರತಿಮಗುವೂ ತನ್ನ ಪೋಷಕರ ಸಹಾಯದಿಂದ ಗಿಡವನ್ನು ಬೆಳೆಸಿ ಆರು ತಿಂಗಳ ನಂತರ ಅದರ ಬೆಳವಣಿಗೆಯ ಜವಾಬ್ಧಾರಿಯನ್ನು ತೆಗೆದುಕೊಂಡು ಉತ್ತಮ ಫಲಿತಾಂಶ ಹೊಂದಿದ ಮಗುವಿಗೆ ಬಹುಮಾನ ನೀಡುವುದನ್ನೂ ತಿಳಿಸಲಾಯಿತು . ಮುಖ್ಯ ಶಿಕ್ಷಕ ನಾರಾಯಣ ಪೂಜಾರಿಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶಿಕ್ಷಕಿ ಮೀನಾಕ್ಷಿಯವರು ವಂದಿಸಿ ಶಿಕ್ಷಕಿ ಸಂಗೀತ ಶಮ೯ರವರು ಕಾಯ೯ಕ್ರಮ ನಿರೂಪಿಸಿದರು.