- Advertisement -
- Advertisement -
ತಿರುವನಂತಪುರಂ: ಕೇರಳದಲ್ಲಿ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರ (ಆರ್ ಜಿಸಿಬಿ)ಯ ಎರಡನೇ ಕ್ಯಾಂಪಸ್ ಗೆ ಆರ್ ಎಸ್ಎಸ್ ನ ಸರಸಂಘಚಾಲಕರಾಗಿದ್ದ ಗೋಳವಲ್ಕರ್ ಅವರ ಹೆಸರು ನಾಮಕರಣ ಮಾಡುವುದಕ್ಕೆ ಆಕ್ಷೇಪ, ವಿರೋಧ ವ್ಯಕ್ತವಾಗತೊಡಗಿದೆ.
ಆಡಳಿತಾರೂಢ ಸಿಪಿಐ-ಎಂ ಹಾಗೂ ವಿಪಕ್ಷ ಕಾಂಗ್ರೆಸ್ ಗೋಳವಲ್ಕರ್ ಅವರ ಹೆಸರನ್ನು ನಾಮಕರಣ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಕೋಮುವಾದದ ಕಾಯಿಲೆಯನ್ನು ಹರಡುವುದನ್ನು ಬಿಟ್ಟು, ವಿಜ್ಞಾನಕ್ಕೆ ಗೋಳ್ವಲ್ಕರ್ ಅವರ ಕೊಡುಗೆಯೇನು? ಎಂದು ತಿರುವನಂತಪುರಂ ನ ಸಂಸದ ಶಶಿ ತರೂರ್ ಪ್ರಶ್ನಿಸಿದ್ದಾರೆ.
ಕೇರಳದ ಆರ್ ಜಿಸಿಬಿಯ ಎರಡನೇ ಕ್ಯಾಂಪಸ್ ಗೆ “ಶ್ರೀ ಗುರೂಜಿ ಮಾಧವ್ ಸದಾಶಿವ್ ಗೋಳವಲ್ಕರ್ ಕ್ಯಾನ್ಸರ್ ಮತ್ತು ವೈರಲ್ ಸೋಂಕು ಸಂಕೀರ್ಣ ರೋಗದ ರಾಷ್ಟ್ರೀಯ ಕೇಂದ್ರ ಎಂದು ನಾಮಕರಣ ಮಾಡುವುದಕ್ಕೆ ಉದ್ದೇಶಿಸಲಾಗಿದೆ.
- Advertisement -