Friday, April 26, 2024
spot_imgspot_img
spot_imgspot_img

ಆತ್ಮಹತ್ಯೆ ಕುರಿತು ಸ್ಪಷ್ಟನೆ ನೀಡಿದ ಸಿ. ಎಂ ರಾಜಕೀಯ ಕಾರ್ಯದರ್ಶಿ ಸಂತೋಷ್

- Advertisement -G L Acharya panikkar
- Advertisement -

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತಮ್ಮ ಆತ್ಮಹತ್ಯೆ ಯತ್ನದ ಕುರಿತು ಕೂಡ ಸಂತೋಷ್ ಅವರು ಸ್ಪಷ್ಟನೆ ನೀಡಿದ್ದಾರೆ.

ಇದೊಂದು ಆಕಸ್ಮಿಕ ಘಟನೆ. ಹತ್ತಿರದ ಸಂಬಂಧಿಯೊಬ್ಬರ ಮದುವೆಯಲ್ಲಿ ಊಟ ಮಾಡಿದ್ದೆ. ಅರ್ಜೀಣವಾಗಿತ್ತು. ಆ ಸಂಬಂಧ ಮಾತ್ರೆ ತೆಗೆದುಕೊಂಡಿದ್ದೆ. ಜತೆಗೆ ನಿದ್ದೆ ಮಾತ್ರೆ ಸೇವಿಸಿದ ಪರಿಣಾಮ ಆರೋಗ್ಯದಲ್ಲಿ ಏರು ಪೇರಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.

ಪ್ರತಿ ದಿನ ಅರ್ಧ ಮಾತ್ರೆ ಸೇವಿಸಿತ್ತಿದ್ದೆ. ಅಂದು ಒಂದು ಇಡೀ ಮಾತ್ರೆ ಸೇವಿಸಿದ್ದೆ. ಇದರಿಂದ ಡೋಸೆಜ್ ಹೆಚ್ಚಾಗಿ ಈ ಅನಾಹುತ ಸಂಭವಿಸಿದೆ. ಇದರ ಹೊರತಾಗಿ ಬೇರೆ ಕಾರಣಗಳಿಲ್ಲ ಎಂದು ಸಂತೋಷ್ ಹೇಳಿದ್ದಾರೆ. ನಾನು ಯಾವುದೇ ರಾಜಕೀಯ ಒತ್ತಡ ಅನುಭವಿಸುತ್ತಿಲ್ಲ ಎಂದು ಸಂತೋಷ್ ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!