ಬಂಟ್ವಾಳ : ವ್ಯಕ್ತಿಯೋರ್ವರು ತನ್ನ ಕಾರಿನಲ್ಲಿ ಹೋಗುವಾಗ ಕಾರಿಗೆ ಅಡ್ಡಕಟ್ಟಿ ಅವ್ಯಾಚವಾಗಿ ಬೈದು,ಹಲ್ಲೆ ನಡೆಸಿ, ಕಾರಿಗೆ ಹಾನಿ ಮಾಡಿದ ಘಟನೆ ಬಂಟ್ವಾಳ ನರಿಕೊಂಬು ಗ್ರಾಮದ ಪೈತಾಜೆ ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ನರಿಕೊಂಬು ಗ್ರಾಮ ಬಂಟ್ವಾಳ ನಿವಾಸಿ ಎಲ್ ಜೀವನ (45) ಎಂದು ಗುರುತಿಸ;ಲಾಗಿದೆ.
ಎಲ್ ಜೀವನ ಎಂಬವರುದಿನಾಂಕ 12-2-2024 ರಂದು ಸಂಜೆ, ತನ್ನ ತಂದೆಯ ಮನೆಯಾದ ನರಿಕೊಂಬು ಗ್ರಾಮದ ಪೈತಾಜೆಯಿಂದ ಮಂಗಳೂರಿನ ಮನೆಗೆ ಕಾರಿನಲ್ಲಿ ಹೋಗುತ್ತಾ ತಂದೆಯ ಮನೆಯಿಂದ ಸ್ವಲ್ಪದೂರ ತಲುಪಿದಾಗ, ಆರೋಪಿಗಳಾದ ಶರತ್ ಮೊಗರ್ನಾಡು, ನರಿ ಕೊಂಬು ಮ್ಯಾಕ್ಸಿಂ ಮಿನೇಜಸ್, ಪೈತಾಜೆ, ನರಿಕೊಂಬು ರೋಹಿತ್ ಪೂಜಾರಿ, ಪೈತಾಜೆ, ನರಿಕೊಂಬು ಉಮೇಶ ಭಂಡಾರಿ, ಪೈತಾಜೆ,ನರಿಕೊಂಬು ,ಅಭಿ, ತಾಲಿಪಡ್ಪು, ಯಶೋಧರ, ಕೇದಿಗ ,ರಮೇಶಸಪಲ್ಯ ,ಚೇತು ಪೂಜಾರಿ ಪೈತಾಜೆ, ನರಿಕೊಂಬು ,ಸಿನಿತ್ ಡಿಸೋಜ, ಪೈತಾಜೆ, ನರಿಕೊಂಬು ಎಂಬವರುಗಳು 2 ಕಾರು ಹಾಗೂ 1 ಬೈಕ್ ಗಳಲ್ಲಿ ಬಂದು, ಕಾರಿಗೆ ಅಡ್ಡಕಟ್ಟಿ ಕತ್ತಿ ಹಾಗೂ ದೊಣ್ಣೆಗಳನ್ನು ಹಿಡಿದು, ಜೀವನರನ್ನು ಉದ್ದೇಶಿಸಿ ಅವ್ಯಾಚವಾಗಿ ಬೈದು, ಕಾರಿಗೆ ಹಾನಿ ಮಾಡಿದ್ದಾರೆ. ಆರೋಪಿ ಶರತ್ ಎಂಬವರು ಜೀವನರವರಿಗೆ ಹಲ್ಲೆ ನಡೆಸಿ, ಅವರ ಕಾರನ್ನು ಚರಂಡಿಗೆ ದೂಡಿ ಹಾಕಿದ್ದು, ಆಗ ಮತ್ತೋರ್ವ ಆರೋಪಿ ಸಿನಿತ್ ಡಿಸೋಜರವರು ಕತ್ತಿಯಿಂದ ಕಡಿಯಲು ಪ್ರಯತ್ನಿಸಿ ಜೀವಬೆದರಿಕೆ ಹಾಕಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಜೀವನರವರು ಮಂಗಳೂರಿನ ವೆನ್ಲಾಕ್ ಆಸ್ವತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ- 47/2024 ಕಲಂ: 341, 324, 427, 504, 506, 143, 147 ಜೊತೆ 149 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.