ನರಿಮೊಗರು: ಇಂದು ರಾಜ್ಯಾಧ್ಯಂತ ‘ನಾವೂ ಬದುಕ ಬೇಕು’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಪ್ರತಿಭಟನೆಯ ಅಂಗವಾಗಿ ಎಸ್.ಡಿ.ಪಿ.ಐ ನರಿಮೊಗರು ವಲಯದ ವತಿಯಿಂದ ಮುಕ್ವೆ ಮತ್ತು ಪುರುಷರಕಟ್ಟೆ ಜಂಕ್ಷನ್ ನಲ್ಲಿ ಜನಾಗ್ರಹ ಆಂದೋಲನ ಪ್ರತಿಭಟನೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಪಾದ್ಯಕ್ಷರಾದ ಇಬ್ರಾಹಿಂ ಸಾಗರ್, ನರಿಮೊಗರು ವಲಯ ಅಧ್ಯಕ್ಷರಾದ ಸಿರಾಜ್ ಮುಕ್ವೆ , ನರಿಮೊಗರು ಪಂಚಾಯತ್ ಸದ್ಯರಾದ ಶಾಫಿ ಮುಕ್ವೆ , ಪಿ.ಎಫ್.ಐ ಏರಿಯ ಕಾರ್ಯದರ್ಶಿಗಳಾದ ನಿಯಾಝ್ ಮುಕ್ವೆ, ಎಸ್.ಡಿ.ಪಿ.ಐ ತಾಲೂಕು ಸಮಿತಿಯ ಸದಸ್ಯರಾದ ಪಿ.ಬಿ.ಕೆ ಮುಹಮ್ಮದ್, ಬಂಟ್ವಾಳ ಎಸ್.ಡಿ.ಪಿ.ಐ ಪಕ್ಷದ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ, ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಶಾಕಿರ್, ವಿಟ್ಲ ವಲಯ ಸಮಿತಿ ಅಧ್ಯಕ್ಷರಾದ ರಹಿಮಾನ್, ವಿಟ್ಲ ವಲಯ ಸಮಿತಿ ಸದಸ್ಯರಾದ ರಿಯಾಜ್ ವಿಟ್ಲ, ಅಸನ್ ಕುಂಞಿ ವಿಟ್ಲ, ಅಬ್ದುಲ್ ರಹಿಮಾನ್, ಮೇಗಿನ ಪೇಟೆ ಬ್ರಾಂಚ್ ಅಧ್ಯಕ್ಷರಾದ ರಫೀಕ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಊಟದ ತಟ್ಟೆ, ಊಟದ ಮಡಿಕೆ ಹಾಗೂ ಕಾಲಿ ಚೀಲಗಳನ್ನು ಪ್ರದರ್ಶನ, ಘೋಷಣೆ ಕೂಗುವ ಮೂಲಕ ಆಡಳಿತ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಲಾಯಿತು.