- Advertisement -
- Advertisement -
ತೆಲಂಗಾಣದ ಶ್ರೀಶೈಲಂ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. 9 ಮಂದಿ ಪವರ್ ಸ್ಟೇಷನ್ ಒಳಗಡೆ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ 10 ಅಪಾಯದಿಂದ ಪಾರಾಗಿದ್ದಾರೆ.
ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀಶೈಲಂ ಡ್ಯಾಂ ಕೆನಲ್ ನಲ್ಲಿ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಅವಘಡ ಸಂಭವಿಸಿದೆ. ಈವೇಳೆ ಸುಮಾರು 19 ಮಂದಿ ಕರ್ತವ್ಯ ನಿರತರಾಗಿದ್ದರು. ಇದರಲ್ಲಿ 10 ಮಂದಿ ಟನೆಲ್ ನಿಂದ ಹೊರಗೆ ಓಡಿ ಬಚಾವಾಗಿದ್ದಾರೆ. ಇನ್ನುಳಿದ 9 ಮಂದಿಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಪ್ಯಾನಲ್ ಬೋರ್ಡ್ ಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
- Advertisement -