- Advertisement -
- Advertisement -
ಬೆಂಗಳೂರು: ಕೆ.ಜಿ.ಹಳ್ಳಿ ಗಲಭೆ ವೇಳೆ ಸುಟ್ಟು ಕರಕಲಾದ ಮನೆಗೆ ಇಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕುಟುಂಬ ಭೇಟಿ ನೀಡಿದರು. ಈ ವೇಳೆ ಸುಟ್ಟು ಕರಕಲಾದ ಮನೆ ನೋಡಿ ಅಖಂಡ ಶ್ರೀನಿವಾಸ ಮೂರ್ತಿ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಸುಟ್ಟು ಕರಕಲಾದ ಮನೆ ನೋಡಿ ಕುಟುಂಬಸ್ಥರ ದುಃಖದ ಕಟ್ಟೆ ಒಡೆದುಹೋಗಿತ್ತು. ದಾಖಲೆಗಳು ಸೇರಿದಂತೆ ಮನೆಯ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿದೆ. ನಮ್ಮ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ. ನಾವೇನು ತಪ್ಪು ಮಾಡಿದ್ದೇವು. ನಮಗೆ ನ್ಯಾಯಬೇಕು ಇಡೀ ಕುಟುಂಬಸ್ಥರು ಆಗ್ರಹಿಸಿದ್ದಾರೆ.
- Advertisement -