- Advertisement -
- Advertisement -
ವಿಟ್ಲ :ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇವರ ನೇತೃತ್ವದಲ್ಲಿ ಬಡ ಕುಟುಂಬದ ಸೇಸಮ್ಮ ಪೂಜಾರಿ ಎಂಬವರಿಗೆ ನೂತನ ಮನೆ ನಿರ್ಮಾಣ ಮಾಡಿ ಕೊಡುತ್ತಿದ್ದು, ಈ ಹಿನ್ನಲೆ ಯುವವಾಹಿನಿ (ರಿ) ವಿಟ್ಲ ಘಟಕದ ವತಿಯಿಂದ ಸೇವಾನಿಧಿಯಿಂದ ಸಂಗ್ರಹವಾದ ಸುಮಾರು 10000 ರೂ. ದೇಣಿಗೆಯನ್ನು ಸೇಸಮ್ಮ ಪೂಜಾರಿ ಅವರ ಮನೆ ನಿರ್ಮಾಣಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ರಾಜೇಶ್ ವಿಟ್ಲ, ಉಪಾಧ್ಯಕ್ಷ ಹರೀಶ್ ಮರುವಾಳ, ಕಾರ್ಯದರ್ಶಿ ಶೋಭಾ, ಕೋಶಾಧಿಕಾರಿ ನಿರ್ಮಲ, ಮಹಿಳಾ ನಿರ್ದೇಶಕಿ ಸುನೀತಾ, ಸಿದ್ದಿ ವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟಿನ ಅಧ್ಯಕ್ಷ ರಂಜಿತ್ ನೆಕ್ಕರೆ ಹಾಗೂ ಕಾರ್ಯದರ್ಶಿ ಜಗದೀಶ್ ನೂಜಿ ಉಪಸ್ಥಿತರಿದ್ದರು.
- Advertisement -