Thursday, April 25, 2024
spot_imgspot_img
spot_imgspot_img

ಸಿಸ್ಟರ್ ಅಭಯ ನಿಗೂಢ ಸಾವು: ಇಬ್ಬರು ತಪ್ಪಿತಸ್ಥರು- 28 ವರ್ಷಗಳ ಬಳಿಕ ಸಿಬಿಐ ಕೋರ್ಟ್ ತೀರ್ಪು

- Advertisement -G L Acharya panikkar
- Advertisement -

ತಿರುವನಂತಪುರಂ: ಕೇರಳದ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಸಿಸ್ಟರ್ ಅಭಯ ನಿಗೂಢ ಸಾವಿನ ಕುರಿತು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಕ್ರೈಸ್ತ ಪ್ರಾದಿ ಥೋಮಸ್ ಕೊಟ್ಟುರ್ ಮತ್ತು ಸೀಪೈ ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ನ್ಯಾಯಾಲಯ ಪ್ರಕಟಿಸಿದೆ. ಆರೋಪಿಗಳ ವಿರುದ್ದ ಹತ್ಯೆ ಮತ್ತು ಸಾಕ್ಷ್ಯ ನಾಶದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 1992 ಮಾರ್ಚ್ 27ರಂದು ಸಿಸ್ಟರ್ ಅಭಯ ಅವರ ಮೃತದೇಹ ಕ್ವಾನೆಂಟ್ ಆವರಣದಲ್ಲಿದ್ದ ಬಾವಿಯಲ್ಲಿ ಪತ್ತೆಯಾಗಿತ್ತು.

ಅವರನ್ನು ಕೊಂದು ಮೃತದೇಹವನ್ನು ಬಾವಿಗೆ ಎಸೆಯಲಾಗಿತ್ತು ಎಂದು ಆರೋಪಿಸಲಾಗಿತ್ತು. 1993ರಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.

- Advertisement -

Related news

error: Content is protected !!