- Advertisement -
- Advertisement -
ವಿಟ್ಲ: ಪ್ರಣವ್ ಫೌಂಡೇಶನ್ ಬೆಂಗಳೂರು ಇವರು ವಿಠಲ ಪದವಿಪೂರ್ವ ಕಾಲೇಜಿಗೆ 2 ಸ್ಮಾರ್ಟ್ ಕ್ಲಾಸ್ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಜುಕೇಶನ್ ಸೊಸೈಟಿಯ ಸದಸ್ಯ ರವಿಪ್ರಕಾಶ್ ವಹಿಸಿದ್ದರು. ಪ್ರಣವ್ ಫೌಂಡೇಶನ್ ನ ಆರಂಭಿಕ ಕಾರ್ಯದರ್ಶಿ ನಾಗರಾಜ್ ಹೆಬ್ಬಾಳ್ ಮುಖ್ಯ ಅತಿಥಿಯಾಗಿ, ಫೌಂಡೇಶನ್ ನ ಟ್ರಸ್ಟಿಗಳಾದ ದೀಪಕ್ ನಾಗರಾಜ್, ವಿಷ್ಣು ಘಟ್ಟಿ, ಪ್ರಿಯಾ ರಕ್ಷಿತ್ ಗೌಡ, ಜನಾರ್ದನ ಪುತ್ತೂರು ಹಾಗೂ ಕಿಶೋರ್ ಅತಿಥಿಗಳಾಗಿ ಭಾಗವಹಿಸಿದರು.
ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿ, ಉಪನ್ಯಾಸಕ ಪ್ರಕಾಶ್ ನಾಯಕ್ ಫೌಂಡೇಶನ್ ನ ಪರಿಚಯ ಮಾಡಿದರು. ಉಪನ್ಯಾಸಕಿ ಅರುಣಾಕುಮಾರಿ ವಂದಿಸಿದರು. ಉಪನ್ಯಾಸಕ ಚಂದ್ರಕಾಂತ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಎಜುಕೇಶನ್ ಸೊಸೈಟಿ ಸದಸ್ಯ ನಿತ್ಯಾನಂದ ನಾಯಕ್ ಹಾಗೂ ಆಡಳಿತಧಿಕಾರಿ ಪ್ರಶಾಂತ್ ಚೊಕ್ಕಾಡಿ ಉಪಸ್ಥಿತರಿದ್ದರು.
- Advertisement -