- Advertisement -
- Advertisement -
ಮಂಗಳೂರು: ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕೊಡಿಯಾಲ್ಬೈಲಿನಲ್ಲಿ ಸಂಭವಿಸಿದೆ. ವಿಜಯಾ(33) ಮತ್ತು ಶೋಭಿತಾ (4) ಮೃತ ದುರ್ದೈವಿಯಾಗಿದ್ದು, ಅದೃಷ್ಟವಶಾತ್ 12 ವರ್ಷದ ಯಜ್ಞಾ ಪಾರಾಗಿದ್ದಾಳೆ.
ವಿಜಯಾ ಅವರ ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆಕೆ ತನ್ನ ಮಕ್ಕಳಿಗೆ ಆಸರೆ ಇರಲಿ ಎಂದು ಮರು ಮದುವೆಯಾಗಿದ್ದರು. ಆದರೆ ಮರು ಮದುವೆಯಾಗಿದ್ದ ಉಮೇಶ್ ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.
ಆಸರೆಯಾಗಿದ್ದ ತನ್ನ ಎರಡನೇ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದರಿಂದ ಮನನೊಂದ ವಿಜಯಾ ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
ಈ ವೇಳೆ ಯಜ್ಞಾಳ ಕಾಲಿಗೆ ಟೀಪಾಯಿ ಸಿಕ್ಕಿದ್ದರಿಂದ ಅದರ ಮೇಲೆ ನಿಂತು ಜೀವ ಉಳಿಸಿಕೊಳ್ಳಲು ಜೋರಾಗಿ ಕೂಗಿದಳು. ಕೂಡಲೇ ಅಲ್ಲಿಗೆ ಬಂದ ಸ್ಥಳೀಯರು ಮೂವರನ್ನು ಕೆಳಗಿಳಿಸಿದರು. ಆದರೆ ಅಷ್ಟರಲ್ಲಾಗಲೇ ವಿಜಯಾ ಮತ್ತು ಶೋಭಿತಾ ಮೃತಪಟ್ಟಿದ್ದರು.
- Advertisement -