- Advertisement -
- Advertisement -
ಮೈಸೂರು (ಅ.30): ಬೆಂಗಳೂರಿನಿಂದ ಮೈಸೂರಿಗೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮಣ್ಣುಮುಕ್ಕ ಹಾವನ್ನು ಅರಣ್ಯ ಸಂಚಾರಿ ದಳದ ಪೊಲೀಸರು ರಕ್ಷಣೆ ಮಾಡಿ, ಐವರನ್ನು ಬಂಧಿಸಿದ ಘಟನೆ ಬೆಂಗಳೂರಿನ ರಸ್ತೆಯ ಸಿದ್ದಲಿಂಗಪುರದ ಬಳಿ ನಡೆದಿದೆ.
ದೊಡ್ಡಯ್ಯ (45) ,ಹೇಮಂತ್ (19), ಯೋಗೇಶ್ (24), ರವಿ (35) ಹಾಗೂ ಭರಮೇಗೌಡ (23) ಬಂಧಿತ ಆರೋಪಿಗಳು. ಇವರು ಈ ಹಾವನ್ನು ಮಾರಾಟ ಮಾಡಲೆಂದು ಕಾರಿನಲ್ಲಿ ಬರುತ್ತಿರುವಾಗ ಮೈಸೂರು-ಬೆಂಗಳೂರಿನ ರಸ್ತೆಯ ಸಿದ್ದಲಿಂಗಪುರದ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.ಆರ್ ಎಪ್ಒ ವಿವೇಕ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
- Advertisement -