Wednesday, July 2, 2025
spot_imgspot_img
spot_imgspot_img

ಪಂಜ: ಸೂರ್ಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ: ಸಮಾರೋಪ ಸಮಾರಂಭ

- Advertisement -
- Advertisement -

ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ಇದರ ಆಶ್ರಯದಲ್ಲಿ ಪಂಚಶ್ರೀ ಜೀವ ರಕ್ಷಕ ಅಂಬ್ಯುಲೆನ್ಸ್ ನ 5ನೇ ವರ್ಷದ ಪಾದಾರ್ಪಣೆಯ ಪ್ರಯುಕ್ತ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ಸುಳ್ಯ ತಾಲೂಕು ಅಮೆಚೂ‌ರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದಲ್ಲಿ 65 ಕೆ.ಜಿ ವಿಭಾಗದ ಸೂರ್ಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಪಂಚಶ್ರೀ ಟ್ರೋಫಿ-2025, ಪದಾಧಿಕಾರಿಗಳ ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮ ಪ್ರಯುಕ್ತ ಜ.5.ರಂದು ಮುಂಜಾನೆ ಸಮಾರೋಪ ಸಮಾರಂಭ ನಡೆಯಿತು.
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್‌ ಪಂಜದಬೈಲು ಸಭಾಧ್ಯಕ್ಷತೆ ವಹಿಸಿದ್ದರು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಕಾನತ್ತೂರ್ ಬಹುಮಾನ ವಿತರಣೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವೀಣಾ ನಿವೃತ್ತ ಯೋಧ ಪದ್ಮನಾಭ ಬೊಳ್ಳಾಜೆ, ಹಾಗೂ ಪ್ರಗತಿಪರ ಕೃಷಿಕ ಹುಕ್ರಪ್ಪ ಗೌಡ ಪಲ್ಲತ್ತಡ್ಕ, ಬೆಂಗಳೂರಿನ ಯುವ ಉದ್ಯಮಿ ಪ್ರಣಮ್ ರೈ ಅರ್ಗುಡಿ, ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ದಲ್ಲು,ಪಲ್ಲೋಡಿ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ, ಕುಸುಮಾಧರ ಕೋಟೆಗುಡ್ಡೆ, ರಾಷ್ಟ್ರೀಯ ಹಿರಿಯ ಕ್ರೀಡಾಪಟು ರವಿ ಚಳ್ಳಕೋಡಿ, ಕಾರ್ಯದರ್ಶಿ ತಾರಾನಾಥ (ಶಶಿ) ದಾಸ್, ಕಡಬ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ಯಾಕಬ್, ಪೆರುವಾಜೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಸುನಿಲ್ ರೈ, ದ.ಕ.ಜಿಲ್ಲಾ

ಅಮೆಚೂರು ಕಬಡ್ಡಿ ಅಸೋಸಿಯೇಶನ್ ಗೌರವ ಸಲಹೆಗಾರ ರತನ್ ಶೆಟ್ಟಿ ಕಬಡ್ಡಿ ಪಂದ್ಯಾಟ ಸಂಯೋಜಕರಾದ ಸತೀಶ್ ಕೆರೆಯಡ್ಕ, ವರ್ಷಿತ್ ಪಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪವನ್ ಪಲ್ಲತ್ತಡ್ಕ ಸ್ವಾಗತಿಸಿದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಬಿಪಿನ್ ಸಂಕ ವಿಜೇತರ ಪಟ್ಟಿಯಾಚಿಸಿದರು. ಶರತ್ ಕುದ್ದ ವಂದಿಸಿದರು.ಫಲಿತಾಂಶ: ಒಟ್ಟು 24 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿತ್ತು.ಶ್ರೀನಿಧಿ ಪುತ್ಯ (ಪ್ರಥಮ), ಯುವಶಕ್ತಿ ಗೆಳೆಯರ ಬಳಗ ಪೊಳೆಂಜ(ದ್ವಿತೀಯ), ಪಾಂಚಜನ್ಯ ಕೋಡಿಂಬಾಳ (ತೃತೀಯ), ಆದರ್ಶ ಹೊಸಮಠ ಎ (ಚತುರ್ಥ),ಆದರ್ಶ ಹೊಸಮಠ ಬಿ (ಪಂಚಮ), ಕಾವೇರಿ ಮಾತಾ ಕೊಡಗು (ಷಷ್ಠ), ಬಿ.ಕೆ ಬಾಯ್ಸ್ ಬಂಗಾರಕೋಡಿ (ಸಪ್ತಮ), ಸೆವೆನ್ ಸ್ಟಾರ್ ಕಲ್ಪನೆ (ಅಷ್ಠಮ) ಸ್ಥಾನ ಪಡೆದಿದೆ. ಶಿಸ್ತು ಬದ್ದ ತಂಡ ಆದರ್ಶ ಹೊಸಮಠ ಬಿ, ಬೆಸ್ಟ್ ರೈಡರ್ ಶ್ರೀನಿಧಿ ತಂಡದ ದೇವ್, ಬೆಸ್ಟ್ ಕ್ಯಾಚರ್ ಪೊಳೆಂಜ ತಂಡದ ಆದರ್ಶ್, ಎಮರ್ಜಿಂಗ್ ಪ್ಲೇಯ‌ರ್ ಆದರ್ಶ ಹೊಸಮಠ ತಂಡದ ಕಿಶನ್, ಬೆಸ್ಟ್ ಆಲ್ ರೌಂಡ‌ರ್ ಶ್ರೀನಿಧಿ ತಂಡದ ಗಂಗಾರಾಮ್, ಗೇಮ್ ಚೇಂಜರ್ ಪೊಳೆಂಜ ತಂಡದ ಅಜಯ್ ಕುಟ್ಟಿ ರವರು ವೈಯಕ್ತಿಕ ಬಹುಮಾನ ಪಡೆದಿದ್ದಾರೆ.

- Advertisement -

Related news

error: Content is protected !!