Friday, April 19, 2024
spot_imgspot_img
spot_imgspot_img

ಎಸ್ ಎಸ್ ಎಫ್ ಮಂಗಳಪದವು ಸೆಕ್ಟರ್ 2020-21ನೇ ಸಾಲಿನ ವಾರ್ಷಿಕ ಮಹಾಸಭೆ

- Advertisement -G L Acharya panikkar
- Advertisement -

ವಿಟ್ಲ: ಎಸ್ಎಸ್ ಎಫ಼್ ಮಂಗಳಪದವು ಸೆಕ್ಟರ್ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಮಂಗಳಪದವು ಸೆಕ್ಟರ್ ಅಧ್ಯಕ್ಷರಾದ ಹಕೀಂ ಮುಸ್ಲಿಯಾರ್ ನೆಲ್ಲಿಗುಡ್ಡೆ ಅಧ್ಯಕ್ಷತೆಯಲ್ಲಿ ಮಂಗಳಪದವು ಮದ್ರಸ ಹಾಲ್ ನಲ್ಲಿ ದಿನಾಂಕ 02/01/2021 ರಂದು ನಡೆಯಿತು.

ಈ ಸಭೆಯಲ್ಲಿ ಬಿಲಾಲ್ ಜುಮ್ಮಾ ಮಸ್ಜಿದ್ ಖತೀಬರಾದ ಅಬ್ದುಸ್ಸಲಾಂ ಅಮ್ಜದಿ ಉಸ್ತಾದರು ದುಆಃ ನೇತೃತ್ವ ವಹಿಸಿದರು. ನಂತರ ಸೆಕ್ಟರ್ ಕೋಶಾಧಿಕಾರಿಯಾದ ರಫೀಕ್ ಅಹ್ಸನಿಯವರು ಸ್ವಾಗತ ಮಾಡಿದರು. ಎಸ್ ವೈ ಎಸ್ ಮಂಗಳಪದವು ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸಖಾಫಿಯವರು ಸಭೆಯನ್ನು ಉದ್ಘಾಟಿಸಿದರು. ನಂತರ ಸೆಕ್ಟರ್ ಪ್ರ.ಕಾರ್ಯದರ್ಶಿಯಾದ ಇಬ್ರಾಹಿಂ ಕೋಡಪದವುರವರು ವರದಿ ಮಂಡಿಸಿದರು. ಮತ್ತು ಸೆಕ್ಟರ್ ಕೋಶಾಧಿಕಾರಿಯಾದ ರಫೀಕ್ ಮುಈನಿ ಅಲ್ ಅಹ್ಸನಿ ಯವರು ಲೆಕ್ಕ ಪತ್ರ ಮಂಡಿಸಿದರು. ನಂತರ ಸೆಕ್ಟರ್ ಅಧ್ಯಕ್ಷರಾದ ಹಕೀಂ ಮುಸ್ಲಿಯಾರ್ ನೆಲ್ಲಿಗುಡ್ಡೆ ಅಧ್ಯಕ್ಷ ಭಾಷಣ ಮಾಡಿದರು.

ಸೆಕ್ಟರ್ ಎಸ್.ಒ (ಸೆಲೆಕ್ಷನ್ ಆಫಿಸರ್)ಆಗಿ ಬಂದ ಎಂ.ಐ.ಎಂ ಅಶ್ರಫ್ ಸಖಾಫಿ ಕನ್ಯಾನ ಸಂಘಟನೆ ವಿಷಯದ ಕುರಿತು ಮಾತನಾಡಿದರು. ನಂತರ ಡಿವಿಷನ್ ವೀಕ್ಷಕರಾಗಿ ಬಂದ ಅಬ್ದುಲ್ ಕಾದರ್ ಕೊಡಂಗಾಯಿ, ಅಝೀಝ್ ಮದನಿ ಕನ್ಯಾನ, ಎಂ.ಐ.ಎಂ ಅಶ್ರಫ್ ಸಖಾಫಿ ಕನ್ಯಾನ, ಹಸನ್ ಸಅದಿ ಕುಕ್ಕಿಲ ಹಾಗೂ ಅಬ್ದುಲ್ ರಝಾಕ್ ಪೆಲ್ತಡ್ಕ ಇವರ ಘನ್ಯ ಉಪಸ್ಥಿತಿಯಲ್ಲಿ 2021-2022 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರು: ರಫೀಕ್ ಮುಈನಿ ಅಲ್ ಅಹ್ಸನಿ, ಬಾರೆಬೆಟ್ಟು ,ಪ್ರ.ಕಾರ್ಯದರ್ಶಿ: ಇಬ್ರಾಹಿಂ ಕೋಡಪದವು, ಕೋಶಾಧಿಕಾರಿ : ಶೌಕತ್ ಅಲಿ ಖಾನ್,ನೆಲ್ಲಿಗುಡ್ಡೆ , ಉಪಾಧ್ಯಕ್ಷರು: ಉಮರ್ ಅಮ್ಜದಿ ಕುಕ್ಕಿಲ , ಅಬ್ದುರಶೀದ್ ಸಖಾಫಿ ಕೊಡಂಗೆ.ಕಾರ್ಯದರ್ಶಿಗಳು :ಇಯಾಸ್ ಕೋಡಪದವು,ಬಾತಿಷ ತಾಳಿತ್ತನೂಜಿ, ಬಾತಿಷ್, ಒಕ್ಕೆತ್ತೂರ್
ಮನ್ಸೂರ್ ,ಮಂಗಳಪದವು ಅಶ್ರಫ್ ,ಪೆಲ್ತಡ್ಕ ಅಬ್ದುಲ್ ರಹೀಂ ನೆಲ್ಲಿಗುಡ್ಡೆ.

ಕಾರ್ಯಕಾರಿ ಸಮಿತಿ ಸದಸ್ಯರು:ಅರ್ಶದ್ ಮಂಗಳಪದವು, ಅರ್ಶದ್ ಸಖಾಫಿ ಒಕ್ಕೆತ್ತೂರ್,ಇರ್ಫಾನ್ ಒಕ್ಕೆತ್ತೂರ್,
ಮಸ್ಊದ್ ಹಿಮಮಿ ಕೊಡಂಗೆ, ಆಸಿಫ್ ಹಾಫಿಲ್ಸಮದ್ ಕೋಡಪದವು, ಫಯಾಝ್ ತಾಳಿತ್ತ, ನೂಜಿ ಸಿನಾನ್ ಬಾರೆಬೆಟ್ಟು ಹುಸೈನ್, ಸಅದಿ ಕುಕ್ಕಿಲ ಮುಹಮ್ಮದ್ ಆಶಿಕ್, ಕುಕ್ಕಿಲ ಹಕೀಂ ಮುಸ್ಲಿಯಾರ್, ನೆಲ್ಲಿಗುಡ್ಡೆ ರಫೀಕ್ , ಮುಸ್ಲಿಯಾರ್ ನೆಲ್ಲಿಗುಡ್ಡೆ.

ಎಸ್ಸೆಸ್ಸೆಫ್ ಡಿವಿಷನ್ ಕೌನ್ಸಿಲರ್ಗಳಾಗಿ: ರಫೀಖ್ ಮುಈನಿ ಅಲ್ ಅಹ್ಸನಿ ಬಾರೆಬೆಟ್ಟು, ಇಬ್ರಾಹಿಂ ಕೋಡಪದವು, ಶೌಕತ್ ಅಲಿ ಖಾನ್ ನೆಲ್ಲಿಗುಡ್ಡೆ, ಇಯಾಸ್ ಕೋಡಪದವು, ಹಕೀಂ ಮುಸ್ಲಿಯಾರ್ ನೆಲ್ಲಿಗುಡ್ಡೆ, ಜಲೀಲ್ ಒಕ್ಕೆತ್ತೂರ್, ಇರ್ಫಾನ್ ಒಕ್ಕೆತ್ತೂರ್, ಹಸನ್ ಸಅದಿ ಕುಕ್ಕಿಲ, ಉಮ್ಮರ್ ಅಮ್ಜದಿ ಕುಕ್ಕಿಲ, ಬಾತಿಷ್ ಒಕ್ಕೆತ್ತೂರ್.

ಮಸ್ಊದ್ ಹಿಮಮಿ ಕೊಡಂಗೆ ಆಯ್ಕೆ ಮಾಡಲಾಯಿತು. ನಂತರ ಗತ ಅಧ್ಯಕ್ಷರಿಂದ ನೂತನ ಸಾರಥಿಗಳಿಗೆ ತ್ರಿವರ್ಣಧ್ವಜ ಹಸ್ತಾಂತರಿಸಲಾಯಿತು. ಹಾಗೂ ಗತ ಕೋಶಾಧಿಕಾರಿಯಿಂದ ನೂತನ ಕೋಶಾಧಿಕಾರಿಯವರಿಗೆ ಲೆಕ್ಕದ ವಿಷಯ ಮತ್ತು ಉಳಿಕೆ ಹಣ ನೀಡಲಾಯಿತು. ನಂತರ ನೂತನ ಅಧ್ಯಕ್ಷರಾದ ರಫೀಕ್ ಮುಈನಿ ಅಲ್ ಅಹ್ಸನಿಯವರ ಕಿರು ಮಾತಿನ ನಂತರ ಸಭೆಗೆ ಧನ್ಯವಾದ ಮಾಡಿದರು.

ಈ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಮಂಗಳಪದವು ಬ್ರಾಂಚ್ ನಾಯಕರಾದ ಇಸ್ಮಾಯಿಲ್ ಮಾಸ್ಟರ್, ಅಝೀಝ್ ಮದನಿ ಹಾಗೂ ಬಿಲಾಲ್ ಜುಮ್ಮಾ ಮಸ್ಜಿದ್ ಮಂಗಳಪದವು ಆಡಳಿತ ಸಮಿತಿಯ ಸುಲೈಮಾನ್, ಖಾದರ್ ಖಲೀಫ, ಅಬ್ದುಲ್ ರಹಿಮಾನ್, ರಝಾಕ್, ಮಜೀದ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕಳೆದ ದಿನ ಮರಣ ಹೊಂದಿದ ಎಸ್ ವೈ ಎಸ್ ಕೋಡಪದವು ಬ್ರಾಂಚ್ ನಾಯಕರಾದ ಫಾರೂಕ್ ಹೆಚ್.ಪಿ ಯವರ ತಾಯಿ (ಝೈನಾಬಿ) ಯವರ ಹೆಸರಿನಲ್ಲಿ ತಹ್ಲೀಲ್ ಹೇಳಿ ದುಆಃ ಮಾಡಿ ಸ್ವಲಾತಿನೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.

- Advertisement -

Related news

error: Content is protected !!