- Advertisement -
- Advertisement -
ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಬುಡೋಳಿ ಶಾಖೆಯ ವತಿಯಿಂದ ಜನವರಿ 24 ಆದಿತ್ಯವಾರದಂದು ಇಲ್ಲಿನ ಖಿಳ್ರ್ ಜುಮಾ ಮಸ್ಜಿದ್ ಶೇರ ಎಂಬಲ್ಲಿ ಇಶಾ ನಮಾಝಿನ ಬಳಿಕ ಝುಮ್ರಾ ಕ್ಲಾಸ್ ನಡೆಯಿತು.
ಎಸ್ಸೆಸ್ಸೆಫ್ ಬುಡೋಳಿ ಶಾಖೆ ಅಧ್ಯಕ್ಷರಾದ ಮುಖ್ತಾರ್ ಅಹ್ಮದ್ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆದ ತರಗತಿಯನ್ನು ಖಿಳ್ರ್ ಜುಮಾ ಮಸ್ಜಿದ್ ಶೇರ ಇದರ ಖತೀಬರಾದ ಇಬ್ರಾಹಿಂ ಮದನಿ ಉಸ್ತಾದರು ಉದ್ಘಾಟಿಸಿದರು, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಉಪಾಧ್ಯಕ್ಷರು,ಬುಡೋಳಿ ಶಾಖೆಯ ಉಸ್ತುವಾರಿಯೂ ಆದ ಬಹುವನ್ಯರಾದ ಜಾಬಿರ್ ಸಅದಿ ಉಸ್ತಾದರು ಝುಮ್ರಾ ಕಾರ್ಯಾಗಾರ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು, ಕೊನೆಗೆ ನಮ್ಮನ್ನಗಲಿದ ಉಲಮಾ ಉಮರಾ ನಾಯಕರು ಹಾಗೂ ಕಾರ್ಯಕರ್ತರಿಗೆ ದುವಾ ಮಾಡಿ ಯಾ ಅಕ್ರಮ ಬೈತ್ ನೊಂದಿಗೆ ಕಾರ್ಯಕ್ರಮ ಕೊನೆ ಗೊಳಿಸಲಾಯಿತು.
- Advertisement -