Monday, May 13, 2024
spot_imgspot_img
spot_imgspot_img

ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯ ಮಟ್ಟದ ಫುಟ್​​ಬಾಲ್​ ಆಟಗಾರ ಮೃತ್ಯು;

- Advertisement -G L Acharya panikkar
- Advertisement -

ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯ ಮಟ್ಟದ ಫುಟ್ ಬಾಲ್‌ ಆಟಗಾರ ಸಾವನ್ನಪ್ಪಿರುವ ಘಟನೆ ರಾಜಧಾನಿ ಬೆಂಗಳೂರಿನ ಕೆ ಆರ್ ಪುರಂ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ದುರ್ಘಟನೆ ನಡೆದಿದ್ದು, ರಾಮಮೂರ್ತಿ ನಗರ ಫ್ಲೈ ಓವರ್ ಮೇಲೆ‌ ಸಂಭವಿಸಿದ ಭೀಕರ ಅಪಘಾತದಲ್ಲಿ ಮೊನೀಶ್​​ ಕೆ (27) ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಮೊನೀಶ್ ಅವರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೊನೀಶ್​ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೊನೀಶ್​ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊನೀಶ್​ ಪರಿಕ್ರಮ ಎಫ್ ಸಿ, ಡೆಕ್ಕನ್ ಎಫ್ ಸಿ, ಯಂಗ್ ಚಾಲೆಂಜರ್ಸ್ ಸೇರಿ ವಿವಿಧ ಕ್ಲಬ್ ಗಳ ಪರ ಆಡಿದ್ದರು. ಸದ್ಯ ಅವರು ಬೆಂಗಳೂರು ಈಗಲ್ಸ್ ಎಫ್ ಸಿ ಪರ ಆಡುತ್ತಿದ್ದರಂತೆ. ಮಂಗಳವಾರ ಟೂರ್ನಿಯೊಂದರಲ್ಲಿ ಮೊನೀಶ್​​ ಭಾಗಿಯಾಗಬೇಕಿತ್ತು, ಆದರೆ ಈ ನಡುವೆಯೇ ದುರಂತ ಸಂಭವಿಸಿದೆ. ಮೊನೀಶ್ ನಿಧನ ಹಿನ್ನಲೆ ಬೆಂಗಳೂರು ಈಗಲ್ಸ್ ಎಫ್ ಸಿ ಪಂದ್ಯವನ್ನ ಮುಂದೂಡಿದೆ.

- Advertisement -

Related news

error: Content is protected !!