Monday, May 20, 2024
spot_imgspot_img
spot_imgspot_img

ಸುಬ್ರಹ್ಮಣ್ಯ: ದೇವಾಲಯದ ಯಶಸ್ವಿನಿ ಆನೆಗೆ ಯಾವುದೇ ಅಸೌಖ್ಯತೆ ಇಲ್ಲ, ಆರೋಗ್ಯವಾಗಿದೆ: ಡಾ| ನಿಂಗಯ್ಯ ಸ್ಪಷ್ಟನೆ

- Advertisement -G L Acharya panikkar
- Advertisement -

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್‌ರವರು ದೇವಾಲಯದ ಆನೆಯ ಬಗ್ಗೆ ಹೇಳಿಕೆ ನೀಡಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಯಶಸ್ವಿನಿ ಎಂಬ ಆನೆ ಅಸೌಖ್ಯತೆಯಿಂದ ಬಳಲುತ್ತಿದೆ ಎಂಬ ಹೇಳಿಕೆಯ ಆಧಾರದ ಮೇಲೆ ಕೆಲವು ಮಾಧ್ಯಮದಲ್ಲಿ ಈ ಬಗ್ಗೆ ಸುಳ್ಳು ವರದಿ ಪ್ರಕಟಿಸಿದ್ದರು. ಇದೀಗ ಈ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ ಸ್ಪಷ್ಟನೆ ನೀಡಿದ್ದು, ’ಸರ್ಕಾರದ ನಿರ್ದೇಶನದ ಮೇರೆಗೆ 10 ದಿನಗಳ ಹಿಂದೆ ಶಿವಮೊಗ್ಗದ ವೈದ್ಯ ಡಾ. ವಿನಯ್ ಎಂಬವರು ಬಂದು ಆನೆ ಆರೋಗ್ಯ ಪರಿಶೀಲಿಸಿದ್ದಾರೆ. ಈ ವೇಳೆ ಯಶಸ್ವಿನಿ ಆನೆಗೆ ಯಾವುದೇ ಅಸೌಖ್ಯತೆ ಇಲ್ಲ, ಆರೋಗ್ಯವಾಗಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ನಮ್ಮ ಆನೆಯನ್ನು ಮಾವುತರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಯಾರೂ ಆನೆಯ ಆರೋಗ್ಯದ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.

- Advertisement -

Related news

error: Content is protected !!