- Advertisement -
- Advertisement -
ಸುಬ್ರಹ್ಮಣ್ಯ: ಬೆಂಗಳೂರಿಗೆ ತೆರಳುತ್ತಿದ್ದ ಮಂಗಳೂರು ಕಾರವಾರ ಎಕ್ಸ್ ಪ್ರೆಸ್ ರೈಲು ಮತ್ತೆ ಹಿಂದಿರುಗಿದ ಘಟನೆ ನಡೆದಿದೆ.
ಇತ್ತೀಚಿಗೆ ಸುರಿದ ಭಾರೀ ಗಾಳಿ ಮಳೆಯಿಂದಾಗಿ ರೈಲು ಹಳಿ ಮೇಲೆ ಮರ ಬಿದ್ದಿದೆ. ಘಾಟ್ನ ಎರಡು ಸುರಂಗ ಕಳೆದ ನಂತರದಲ್ಲಿ ರೈಲು ಹಳಿಯಲ್ಲಿ ಮರ ಬಿದ್ದ ಹಿನ್ನಲೆ ರೈಲು ಹಿಂತಿರುಗಿದೆ. ಇಂದಿನ ರೈಲು ಸಂಚಾರ ಆರಂಭಗೊಂಡಿತ್ತು. ಆದರೆ ಮೊದಲ ಪ್ರಯಾಣವು ಮೊಟಕುಗೊಳ್ಳುವ ಸಾಧ್ಯತೆ ಇತ್ತು.
ಹಿಂತಿರುಗಿದ ರೈಲು ಸುಬ್ರಹ್ಮಣ್ಯ ರೈಲು ನಿಲ್ದಾಣಕ್ಕೆ ಬಂದಿದೆ. ಹಳಿಯ ಮೇಲಿನಿಂದ ಮರವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ನಂತರ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಸಂಚಾರ ಮತ್ತೆ ಆರಂಭಿಸಲಿದೆ.
- Advertisement -