ಹಾಸನ: ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವನ್ನು ನೇಣು ಬಿಗಿದು ಕೊಂದು ನಂತರ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹಾಸನ ಜಿಲ್ಲೆ ಸಕಲೇಶಪುರದ ಆನೇಮಹಲ್ ಎಂಬಲ್ಲಿ ಈ ಘಟನೆ ನಡೆಸಿದ್ದು ಮೃತರನ್ನು ಪ್ರಜ್ವಲ (26) ಹಾಗೂ ಆಕೆಯ ಪುತ್ರಿ ಸಾದ್ವಿ (3) ಎಂದು ಗುರುತಿಸಲಾಗಿದೆ. ಸದ್ಯ ಮೃತ ಪ್ರಜ್ವಲ ಅವರ ಮೊದಲ ಪತಿ ಸುರೇಂದ್ರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಕೆಯ ಮನೆಯವರು ಮಗಳ ಮುಂದಿನ ಜೀವನದ ಸುರಕ್ಷತೆ ದೃಷ್ಟಿಯಿಂದ ಅವಳಿಗೆ ಮದುವೆ ಮಾಡಿಸಲು ಪ್ರಯತ್ನಿಸಿದ್ದಾರೆ.
ಹಾಸನದ ಆನೇಮಹಲ್ನ ಮೋಹನ್ ಎಂಬವರ ಪತ್ನಿ ಕಳೆದ ಮೂರು ತಿಂಗಳ ಹಿಂದೆ ಹೆರಿಗೆ ವೇಳೆ ಮೃತಪಟ್ಟಿದ್ದರು. ಅದು ಹೇಗೋ ಪರಿಚಿತರ ತಿಳಿದುಕೊಂಡ ಪೋಷಕರು ಮೋಹನ್ ಮತ್ತು ಪ್ರಜ್ವಲ್ ಅವರಿಗೆ ಮದುವೆ ಮಾಡಿಸಿದ್ದಾರೆ.
ಮದುವೆಯಾದ ಎರಡನೇ ದಿನಕ್ಕೆ ಪ್ರಜ್ವಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಮಗುವಿಗೂ ನೇಣು ಬಿಗಿದು ಕೊಂದು ತಾನೂ ಸಾವನ್ನಪ್ಪಿದ್ದಾಳೆ. ಬದುಕನ್ನು ಎದುರಿಸಲಾಗದೆ ಆಕೆ ಏನೂ ಅರಿಯದ ಮಗುವನ್ನೂ ಕೊಂದು ಹಾಕಿದ್ದಾಳೆ.
ಅತ್ತ ಮೋಹನ್ ಅವರದು ಇನ್ನೊಂದು ತರಹದ ನೋವು. ಮೊದಲ ಪತ್ನಿ ಹೆರಿಗೆ ಸಂಧರ್ಭ ಮೃತಪಟ್ಟಿದ್ದರೆ, ಈಗ 3 ತಿಂಗಳ ಅಂತರದಲ್ಲಿ ಮನೆಯಲ್ಲಿ ಮತ್ತೆ 2 ಸಾವಾಗಿದೆ. ಮೂರೇ ತಿಂಗಳು ಅಂತರದಲ್ಲಿ ಇಬ್ಬರೂ ಪತ್ನಿಯರನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ ಮೋಹನ್. ಘಟನೆ ಸಂಬAಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.