- Advertisement -
- Advertisement -
ಸುಳ್ಯ: ಹುಟ್ಟು ಹಬ್ಬದ ದಿನ ಶಾಲೆಗೆ ರಜೆ ಮಾಡಿ ಸೀರೆಯಲ್ಲಿ ಕಟ್ಟಿದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದಾಗ ಕುತ್ತಿಗೆ ಬಿಗಿದು ಬಾಲಕಿಯೋರ್ವಳು ಮೃತಪ್ಪಟ್ಟ ಘಟನೆ ಏನೆಕಲ್ಲು ಗ್ರಾಮದ ಮುತ್ಲಾಜಡ್ಕ ಎಂಬಲ್ಲಿ ನಡೆದಿದೆ.
ಏನೆಕಲ್ಲು ಗ್ರಾಮದ ಮುತ್ಲಾಜಡ್ಕ ನಿವಾಸಿ ಬಾಬು ಅಜಿಲರವರ ಪುತ್ರಿ ಶೃತಿ ಎಂಬಾಕೆ ಮೃತ ಬಾಲಕಿ.
ಹುಟ್ಟು ಹಬ್ಬವೆಂದು ಶಾಲೆಗೆ ರಜೆ ಮಾಡಿ ಮನೆ ಸಮೀಪದ ಪೇರಳೆ ಮರದಲ್ಲಿ ಸೀರೆಯಲ್ಲಿ ಕಟ್ಟಿದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
- Advertisement -