ಸುಳ್ಯ:-ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಸುಳ್ಯ ಬ್ಲಾಕ್ ನಲ್ಲಿ “ಡಿಜಿಟಲ್ ಯೂತ್” ಮತ್ತು “ನಮ್ಮೂರ ಹೆಮ್ಮೆ” ಪೂರ್ವಬಾವಿ ಸಭೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶ್ರೀ ಮಿಥುನ್ ರೈಯವರ ನೇತೃತ್ವದಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಶ್ರೀ ಮಿಥುನ್ ರೈಯವರು ಡಿಜಿಟಲ್ ಯೂತ್ ಕಾರ್ಯಕ್ರಮದ ರೂಪುರೇಶದ ಕುರಿತು ಮಾಹಿತಿ ನೀಡಿ ಅದರ ಫಾರಂಗಳನ್ನು ವಿತರಿಸಿದರು.ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ, ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ದನಂಜಯ ಅಡ್ಪಂಗಾಯ, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೊಡಿ, ವೆಂಕಪ್ಪ ಗೌಡ, ಶಂಶುದ್ದೀನ್, ಜಿಕೆ ಹಮೀದ್, ಪಿಎ ಗಂಗಾದರ್, ಸುಳ್ಯ ಯುವ ಕಾಂಗ್ರೆಸ್ ವಿಧಾನಸಭಾ ಸಮಿತಿಯ ಅಧ್ಯಕ್ಷರಾದ ಸಿದ್ದೀಕ್ ಕೊಕ್ಕೊ ಜಿಲ್ಲಾ ಪದಾಧಿಕಾರಿಗಳಾದ ಕಿರಣ್ ಬುಡ್ಲೆಗುತ್ತು, ಶರೀಫ್ ಕಂಠಿ, ಲಕ್ಷ್ಮಣ ಶೆಣೈ, ಶಾಫಿ ಕುತ್ತಮುಟ್ಟೆ, ಅನ್ಸಾರದ್ದೀನ್ ಸಾಲ್ಮರ ಸುರೇಶ್, ಪದಾಧಿಕಾರಿಗಳಾದ ಸವಾದ್ ಸುಳ್ಯ, ಕೀರ್ತನ್ ಗೌಡ ಕೊಡ್ಪಾಳ, ಶೌವಾದ್ ಗೂನಡ್ಕ ಮತ್ತು ಪಕ್ಷದ ಪದಾಧಿಕಾರಿಗಳು , ಕಾರ್ಯಕರ್ತರು ಉಪಸ್ಥಿತರಿದ್ದರು.