- Advertisement -
- Advertisement -
ಸುಳ್ಯ: ವ್ಯಕ್ತಿಯೋರ್ವರಿಗೆ ಕ್ಷುಲ್ಲಕ ವಿಚಾರವಾಗಿ ಕೈಯಿಂದ ಹಲ್ಲೆ ನಡೆಸಿದ ಘಟನೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕರ್ ವಿನೋಬನಗರ ಎಂಬಲ್ಲಿ ನಡೆದಿದೆ.
ಹಲ್ಲೆ ನಡೆಸಿದ ವ್ಯಕ್ತಿ ಜಾಲ್ಸೂರು ಗ್ರಾಮ ಸುಳ್ಯ ನಿವಾಸಿ ದೀಕ್ಷಿತ್ ,ಹಲ್ಲೆಗೊಳಗಾದ ವ್ಯಕ್ತಿ ಬೋಜಪ್ಪ ನಾಯ್ಕ ( 61) ಎಂದು ಗುರುತಿಸಲಾಗಿದೆ.
ಬೋಜಪ್ಪ ನಾಯ್ಕ ಅವರು ರಾತ್ರಿ, ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕರ್ ವಿನೋಬನಗರ ಎಂಬಲ್ಲಿ ದಿನಸಿ ಅಂಗಡಿಯ ಬಳಿಯಿದ್ದಾಗ, ಜಾಲ್ಸೂರು ಗ್ರಾಮ ಸುಳ್ಯ ನಿವಾಸಿ ದೀಕ್ಷಿತ್ ಎಂಬಾತನು ಬಂದು ಕ್ಷುಲ್ಲಕ ವಿಚಾರವಾಗಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ ನಂ: 49/2024 ಕಲಂ: 323,324 IPC ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
- Advertisement -