Friday, May 10, 2024
spot_imgspot_img
spot_imgspot_img

ಸುಳ್ಯ: ಕ್ಷುಲ್ಲಕ ವಿಚಾರವಾಗಿ ವ್ಯಕ್ತಿಗೆ ಹಲ್ಲೆ..!

- Advertisement -G L Acharya panikkar
- Advertisement -

ಸುಳ್ಯ: ವ್ಯಕ್ತಿಯೋರ್ವರಿಗೆ ಕ್ಷುಲ್ಲಕ ವಿಚಾರವಾಗಿ ಕೈಯಿಂದ ಹಲ್ಲೆ ನಡೆಸಿದ ಘಟನೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕರ್ ವಿನೋಬನಗರ ಎಂಬಲ್ಲಿ ನಡೆದಿದೆ.

ಹಲ್ಲೆ ನಡೆಸಿದ ವ್ಯಕ್ತಿ ಜಾಲ್ಸೂರು ಗ್ರಾಮ ಸುಳ್ಯ ನಿವಾಸಿ ದೀಕ್ಷಿತ್ ,ಹಲ್ಲೆಗೊಳಗಾದ ವ್ಯಕ್ತಿ ಬೋಜಪ್ಪ ನಾಯ್ಕ ( 61) ಎಂದು ಗುರುತಿಸಲಾಗಿದೆ.

ಬೋಜಪ್ಪ ನಾಯ್ಕ ಅವರು ರಾತ್ರಿ, ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕರ್ ವಿನೋಬನಗರ ಎಂಬಲ್ಲಿ ದಿನಸಿ ಅಂಗಡಿಯ ಬಳಿಯಿದ್ದಾಗ, ಜಾಲ್ಸೂರು ಗ್ರಾಮ ಸುಳ್ಯ ನಿವಾಸಿ ದೀಕ್ಷಿತ್ ಎಂಬಾತನು ಬಂದು ಕ್ಷುಲ್ಲಕ ವಿಚಾರವಾಗಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ ನಂ: 49/2024 ಕಲಂ: 323,324 IPC ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!