- Advertisement -
- Advertisement -
ಸುಳ್ಯ: ಅಪ್ರಾಪ್ತ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಂತೋಡು ಬಿಳಿಯಾರಿನಲ್ಲಿ ನಡೆದಿದೆ. ಬಾಲಕನನ್ನು ಬಿಳಿಯಾರಿನ ದಿ. ಮೂಸಾ ಎಂಬವರ ಪುತ್ರ ಹನ್ಸೀಫ್ (17) ಎಂದು ಗುರುತಿಸಲಾಗಿದೆ.
ಬಾಲಕನ ತಾಯಿ ಶಮೀರಾ ಮಗಳ ಚಿಕಿತ್ಸೆಗಾಗಿ ಕ್ಯಾಲಿಕೆಟ್ ತೆರಳಿದ್ದರು. ಈ ಸಂದರ್ಭ ಬಾಲಕ ಮನೆಯಲ್ಲಿ ಒಬ್ಬನೆ ಇದ್ದು, ರಾತ್ರಿ ವೇಳೆ ತನ್ನ ಅಜ್ಜಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದು, ಬಾಲಕನ ಮಾವ ಅ.1 ರಂದು ನಸುಕಿನ ಜಾವ ಬಾಲಕನ ಮನೆಗೆ ಬಂದಾಗ ಹನ್ಸಿಪ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಬಾಲಕ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿ ನಿಂತಿಕಲ್ಲಿನ ಸಂಸ್ಥೆಯಲ್ಲಿ ಐಟಿಐಗೆ ದಾಖಲಾತಿ ಮಾಡಲಾಗಿತ್ತು. ಇಂದು ತರಗತಿ ಆರಂಭವಾಗಿ ಆತನು ತರಗತಿಗೆ ತೆರಳಬೇಕಾಗಿತ್ತು. ತರಗತಿಗೆ ತೆರಳಲು ತನಗೆ ಮನಸ್ಸಿಲ್ಲ ಎಂದು ಮನೆಯಲ್ಲಿ ಹೇಳಿಕೊಂಡಿದ್ದ. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
- Advertisement -