Friday, May 3, 2024
spot_imgspot_img
spot_imgspot_img

ಸುಳ್ಯ: ಮನೆಗೆ ನುಗ್ಗಿ ಚಿನ್ನಾಭರಣ ಕಳವು..!!

- Advertisement -G L Acharya panikkar
- Advertisement -

ಸುಳ್ಯ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ, ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಕನಕಮಜಲಿನಲ್ಲಿ ನಡೆದಿದೆ. ಇಲ್ಲಿನ ಸುಣ್ಣ ಮೂಲೆಯ ಯುರೇಶ್ ಬುಡ್ಡೆಗುತ್ತು ಎಂಬವರ ಮನೆಗೆ ಭಾನುವಾರ ತಡರಾತ್ರಿ ಹಿಂಬದಿಯ ಬಾಗಿಲು ಮುರಿದು ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ.

ಯುರೇಶ್ ಬುಡ್ಡೆಗುತ್ತು ಅವರ ಸಂಬಂಧಿಯೊಬ್ಬರು ನಿಧನರಾಗಿದ್ದು, ಯುರೇಶ್‌ ಕುಟುಂಬ ಸಮೇತ ಮನೆಯ ಬೀಗ ಹಾಕಿ ಅಂತ್ಯಕ್ರಿಯೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯ ಹಿಂಬದಿ ಬಾಗಿಲು ಮುರಿದ ಮನೆಯೊಳಗೆ ನುಗ್ಗಿದ ಕಳ್ಳರುಚಿನ್ನಾಭರಣಗಳನ್ನು ಕಳವುಗೈದಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು ಮೂವತ್ತು ಪವನ್‌ ಅಧಿಕ ಚಿನ್ನಾಭರಣ ಕಳವುಗೈದಿದ್ದಾರೆಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿ, ಮಹಜರು ನಡೆಸುತ್ತಿದ್ದಾರೆ.

- Advertisement -

Related news

error: Content is protected !!