ಸುಳ್ಯ: ಮಹಿಳಯೋರ್ವರು ಗಂಡನೊಂದಿಗೆ ತಮ್ಮ ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋದ ವೇಳೆ ಆರೋಪಿಗಳಿಬ್ಬರು ಜಮೀನಿಗೆ ಅಕ್ರಮ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವ ಘಟನೆ ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಆರಿಕಲ್ಲು ಎಂಬಲ್ಲಿ ನಡೆದಿದೆ.
ಆರೋಪಿಗಳನ್ನು ಚಂದ್ರಶೇಖರ ಹಾಗೂ ಕುಸುಮಾಧರ ಎಂದು ಗುರುತಿಸಲಾಗಿದೆ.
ಐವರ್ನಾಡು ಗ್ರಾಮ. ಸುಳ್ಯ ನಿವಾಸಿ ಅಪೂರ್ವ (35) ಬೆಳಿಗ್ಗೆ, ಅವರು ಹಾಗೂ ಅವರ ಗಂಡ, ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಆರಿಕಲ್ಲು ಎಂಬಲ್ಲಿರುವ ತಮ್ಮ ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋದ ಸಮಯ, ಆರೋಪಿತರಾದ ಚಂದ್ರಶೇಖರ ಹಾಗೂ ಕುಸುಮಾಧರ ಎಂಬವರುಗಳು ಅಪೂರ್ವ ಅವರ ಜಮೀನಿಗೆ ಅಕ್ರಮ ಪ್ರವೇಶಿಸಿ, ಪಂಪ್ ಶೆಡ್ ನಿಂದ ಬೋವೆಲ್ ಗೆ ಹಾಕಿರುವ ಕೇಬಲ್ ಗಳನ್ನು ತೆಗೆದು ಹಾಕಿರುತ್ತಾರೆ. ಬಳಿಕ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಅಂದಾಜು 120 ಮೀಟರ್ ವಿದ್ಯುತ್ ಕೇಬಲ್ ಅನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವು ಮಾಡಿಕೊಂಡು ಹೋದ ವಿದ್ಯುತ್ ಕೇಬಲ್ ಅಂದಾಜು ಮೌಲ್ಯ ರೂ 9000/- ಅಗಬಹುದು. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:24/2024, ಕಲಂ: 447, 506, 504,379 ಜೊತೆಗೆ 34 ಐ ಪಿ ಸಿ ಪ್ರಕರಣ ದಾಖಲಿಸಿತನಿಖೆ ನಡೆಸಲಾಗುತ್ತಿದೆ.