- Advertisement -
- Advertisement -
ಸುಳ್ಯ: ಅಜ್ಜನ ಮನೆಗೆ ತೆರಳಿದ ಬಾಲಕ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ನಾಪತ್ತೆಯಾದ ಬಾಲಕ ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ನರಸಿಂಗಾನಮನೆ ಅಬ್ದುಲ್ ಹಮೀದ್ ಅವರ ಪುತ್ರ ಅಹಮದ್ ಶಾಹೀದ್ ಎಂದು ಗುರುತಿಸಲಾಗಿದೆ.
ಮಾಡ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದ ಆತ ಅಜ್ಜನ ಮನೆ ಸುಳ್ಯದ ಪರಿವಾರಕಾನ ಅರಂಬೂರಿಗೆ ಹೋಗಿದ್ದು, ಆದರೆ ರಾತ್ರಿಯಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ.ಅಜ್ಜನ ಮನೆಯಿಂದ ಹೊರಡುವ ವೇಳೆ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಲೈಟ್ ಬ್ಲೂ ಕಲರ್ ಉದ್ದ ತೋಳಿನ ಅಂಗಿ ಧರಿಸಿದ್ದ. ಕೈಯಲ್ಲಿ ಒಂದು ಬ್ಯಾಗ್ ಇತ್ತು ಎಂದು ಸುಳ್ಯ ಠಾಣೆಗೆ ಬಾಲಕನ ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -