- Advertisement -
- Advertisement -
ವಿಟ್ಲ: ಸುಪ್ರಜಿತ್ ಫೌಂಡೇಶನ್ ಬೆಂಗಳೂರು ವತಿಯಿಂದ ಸುಪ್ರಜಿತ್ ವಿದ್ಯಾರ್ಥಿವೇತನ ವಿತರಣಾ ಸಮಾರಂಭ-2023 ನ.26 ಭಾನುವಾರ, ಪೂರ್ವಾಹ್ನ ಗಂಟೆ 9ಕ್ಕೆ ಸುವರ್ಣ ರಂಗಮಂದಿರ, ವಿಠಲ ಪ.ಪೂ.ಕಾಲೇಜು, ವಿಟ್ಲ ಇಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ವಿಠಲ ಎಜುಕೇಶನ್ ಸೊಸೈಟಿ(ರಿ) ಸಂಚಾಲಕ ಎಲ್.ಎನ್ ಕೂಡೂರು, ವಿಠಲ ಸುಪ್ರಜಿತ್ ಖಾಸಗಿ ಐಟಿಐ ಕಾಲೇಜಿನ ಸಂಚಾಲಕ ಅಲ್ಫಾನ್ಸ್ ಸಿಲ್ವೆಸ್ಟರ್ ಮಸ್ಕರೇನ್ಹಸ್, ಸ್ಕಾಲರ್ ಶಿಪ್ ಕಮಿಟಿಯ ಅಧ್ಯಕ್ಷ ಪಿ.ಸುಬ್ರಾಯ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -