


ಪುತ್ತೂರು: 3 ತಿಂಗಳ ಹಿಂದೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ ನಗರದ ಕಲ್ಲೇಗ ಅಜೇಯನಗರ ನಿವಾಸಿ ಭರತ್ ಕುಮಾರ್ ಎಂಬವರು ಮೃತಪಟ್ಟಿದ್ದು, ಮಗನ ಸಾವಿನ ಬಗ್ಗೆ ನಮಗೆ ಸಂಶಯವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ಒದಗಿಸಿಕೊಡಬೇಕು ಎಂದು ಮೃತ ಭರತ್ ಕುಮಾರ್ ಅವರ ತಾಯಿ ಸಂಸದ ಕ್ಯಾ | ಬ್ರಿಜೇಶ್ ಚೌಟರಿಗೆ ಮನವಿ ಸಲ್ಲಿಸಿದ್ದಾರೆ.
ಭರತ್ ಕುಮಾರ್ ನನ್ನು ವಿದೇಶಕ್ಕೆ ಕರೆದುಕೊಂಡು ಹೋದಾತ ಮಾನಸಿಕವಾಗಿ ದೈಹಿಕವಾಗಿ ಟಾರ್ಚರ್ ಕೊಟ್ಟು ಹೆದರಿಸಿ ಬಾಯಿ ಮುಚ್ಚಿಸಿದ್ದಾನೆ ಎಂದಿದ್ದಾರೆ. ಪ್ರತಿನಿತ್ಯ ಇವನಲ್ಲಿ ನಮ್ಮ ಬಗ್ಗೆ ನೀನು ಕಂಪ್ಲೇಂಟ್ ಕೊಟ್ಟರೆ ನಿನ್ನನ್ನು ಜೈಲಿಗೆ ಕಳುಹಿಸುವುದಾಗಿಯೂ ಮನೆಯವರಿಗೆ ಹೇಳಿದರೆ ನಿನ್ನನ್ನು ಪೊಲೀಸ್ಗೆ ಹಿಡಿದು ಕೊಟ್ಟು ಜೈಲಲ್ಲಿ ಶಾಶ್ವತವಾಗಿರುವಂತೆ ಮಾಡುತ್ತೇವೆ ಎಂದು ಬೆದರಿಸಿದ್ದಾನೆ.
ಈ ಬಗ್ಗೆ ನಮ್ಮಲ್ಲಿ ನನ್ನ ಮಗ ಅಳುತ್ತಾ ಪ್ರತಿನಿತ್ಯ ಹೇಳಿಕೊಂಡಿದ್ದು ಅವನು ಮಾಡಿದ ಕಾಲ್ ರೆಕಾರ್ಡ್ ವಿಡಿಯೋ ರೆಕಾರ್ಡ್ ನಮ್ಮ ಬಳಿ ಇದೆ. ಅಲ್ಲದೆ ಕಂಪನಿಯ ಹೆಚ್ಆರ್ ಕೂಡ ಈ ವಿಷಯದ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ ಹಾಗೂ ಅವನ ಸಮಸ್ಯೆಗೆ ಸ್ಪಂದಿಸಲಿಲ್ಲ. ಅವನು ಕಾಲು ನೋವು, ತಲೆ ನೋವು ಹಾಗೂ ವಿಪರೀತ ಜ್ವರದಿಂದ ಬಳಲುತ್ತಿದ್ದರೂ ಅವನಿಗೆ ಚಿಕಿತ್ಸೆ ಕೊಟ್ಟಿಲ್ಲ. ಕೊನೆಗೆ ಅವನನ್ನು ಟಾರ್ಚರ್ ಕೊಟ್ಟು ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಂಪನಿ ನಮಗೆ ಆತನ ಸಾವಿನ ಬಗ್ಗೆ ಮಾಹಿತಿ ನೀಡಲಿಲ್ಲ. ಅನ್ಯ ವ್ಯಕ್ತಿ ಈ ಬಗ್ಗೆ ನಮಗೆ ಮಾಹಿತಿ ನೀಡಿದ್ದು ಇವರ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಕೊಡಬೇಕು ಎಂದು ತಮ್ಮ ಪತ್ರದಲ್ಲಿ ಸಂಸದರಿಗೆ ಮನವಿ ಮಾಡಿಕೊಂಡಿದ್ದಾರೆ.