ಪುತ್ತೂರು: ವ್ಯಕ್ತಿಯೋರ್ವರ ಸಂಸಾರದಲ್ಲಿ ಆದ ಮನಸ್ತಾಪದ ಬಗ್ಗೆ ಮಾತನಾಡಲು ಇರುವುದಾಗಿ ವ್ಯಕ್ತಿಯ ಪತ್ನಿ ಸಂಬಂಧಿಕರು ಕಾರಿನಲ್ಲಿ ಕರೆದುಕೊಂಡು ಹೋಗಿ, ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ರೆಂಜ ಎಂಬಲ್ಲಿ ನಡೆದಿದೆ.
ಮೂಲತಃ ಭದ್ರಾವತಿ ತಾಲೂಕು, ಶಿವಮೊಗ್ಗ ಜಿಲ್ಲೆಅಕ್ಸಾ ನಗರ, ಚಿಕ್ಕಿಟ್ಟ ನಿವಾಸಿ ಸೈಯದ್ ಆಸೀಫ್ (28) ಹಲ್ಲೆಗೊಳಗಾದ ವ್ಯಕ್ತಿ.
ಸೈಯದ್ ಆಸೀಫ್ ಅವರ ಪತ್ನಿ ಶಹನಾಜ್ ಎಂಬವರಿಗೆ ಈ ಹಿಂದಿನಿಂದಲೇ ಸಂಸಾರದಲ್ಲಿ ಮನಸ್ತಾಪವಿದ್ದು, ದಿನಾಂಕ 20-12-2023 ರಂದು ಆಸೀಫ್ರವರು ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ರೆಂಜ ಎಂಬಲ್ಲಿರುವ ತನ್ನ ಪರಿಚಯದ ಹಮೀದ್ ಖಾನ್ರವರ ಬಾಡಿಗೆ ಮನೆಗೆ ತೆರಳಿ ಅಲ್ಲಿಯೇ ಉಳಿದುಕೊಂಡಿದ್ದಾಗ, ರಾತ್ರಿ ವೇಳೆ ಆಸೀಫ್ ಪತ್ನಿಯ ಸಂಬಂದಿಕರಾದ ಅಫ್ಲಾಲ್ ಮತ್ತು ಉನೈಸ್ ಹಾಗೂ ಇತರರು ಬಂದು ಆಸೀಫ್ರಲ್ಲಿ ಪತ್ನಿಯ ಜೊತೆಗಿರುವ ಮನಸ್ತಾಪದ ಬಗ್ಗೆ ಮಾತನಾಡಲು ಇರುವುದಾಗಿ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾ ಮಾತುಕತೆ ನಡೆಸಿರುತ್ತಾರೆ.
ಆ ಬಳಿಕ ಆಸೀಫ್ರನ್ನು ಕಾರಿನಿಂದ ಕೆಳಗೆ ಇಳಿಸಿ ಎಲ್ಲರೂ ಸೇರಿಕೊಂಡು ಹಲ್ಲೆ ನಡೆಸಿದ್ದು,ಹಲ್ಲೆಯ ನೋವಿಗಾಗಿ ಆಸೀಫ್ ದಿನಾಂಕ 22-12-2023 ರಂದು ಅರ್ಲಪದವುವಿನ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು, ನಂತರ ನೋವು ಕಡಿಮೆ ಆಗದ ಕಾರಣ ದಿನಾಂಕ 23-12-2023 ರಂದು ಸಂಜೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಘಟನೆ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 126-2023 ಕಲಂ: 323, 324, ಜೊತೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.