Tuesday, April 16, 2024
spot_imgspot_img
spot_imgspot_img

ಮಾಲೀಕನ ಸಾವಿಗೆ ಕಾರಣವಾದ ಹುಂಜ ಪೊಲೀಸರ ವಶಕ್ಕೆ

- Advertisement -G L Acharya panikkar
- Advertisement -

ತೆಲಂಗಾಣ: ತನ್ನ ಮಾಲೀಕನನ್ನೇ ಕೊಂದ ಹುಂಜವನ್ನು ಪೊಲೀಸರು ಕಸ್ಟಡಿಗೆ ಪಡೆದಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ತಂಗುಲ್ಲಾ ಸತೀಶ್ ಹುಂಜದ ದಾಳಿಯಿಂದ ಸಾವನ್ನಪ್ಪಿರುವ ವ್ಯಕ್ತಿ.

ತೆಲಂಗಾಣದ ಜಗ್ಟೈಲ್​ ಜಿಲ್ಲೆಯ ಎಲ್ಲಮ್ಮ ದೇವಾಲಯದ ಸಮೀಪ ಅಕ್ರಮವಾಗಿ ಹುಂಜಗಳ ಅಂಕ ನಡೆಸಲಾಗಿತ್ತು. ಅಂಕದಲ್ಲಿ ಸ್ಪರ್ಧಿಸಿದ್ದ ಹುಂಜ ಆಯಾಸಗೊಂಡಿತ್ತು. ಈ ವೇಳೆ ಸತೀಶ್​ ಅದನ್ನು ಬಿಗಿಯಾಗಿ ಹಿಡಿದುಕೊಂಡಿದ್ದು, ಬಿಡಿಸಿಕೊಳ್ಳಲು ಹುಂಜ ಒದ್ದಾಡಿದೆ.

ಈ ವೇಳೆ ಆಕಸ್ಮಿಕವಾಗಿ ಹುಂಜದ ಕಾಲಿಗೆ ಕಟ್ಟಲಾಗಿದ್ದ ಕತ್ತಿ ತಾಕಿ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸದ್ಯ ಅಂಕದ ಆಯೋಜಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಪೊಲೀಸ್​ ಠಾಣೆಯಲ್ಲಿ ಹುಂಜವನ್ನು ಹಗ್ಗದಿಂದ ಕಟ್ಟಲಾಗಿದ್ದು, ಅದಕ್ಕೆ ಬೇಕಾದ ಆಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ. ಪೊಲೀಸರು ಹುಂಜವನ್ನ ಅರೆಸ್ಟ್​ ಮಾಡಿದ್ದಾರೆ, ವಶಕ್ಕೆ ಪಡೆದಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಆದ್ರೆ ಅದನ್ನ ಪೊಲೀಸರು ನಿರಾಕರಿಸಿದ್ದಾರೆ. ಹುಂಜವನ್ನು ಕೋರ್ಟ್​ಗೆ ಹಾಜರುಪಡಿಸಲಿದ್ದು, ನ್ಯಾಯಾಧೀಶರು ಹೇಳಿದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.

- Advertisement -

Related news

error: Content is protected !!