- Advertisement -
- Advertisement -
ಪುತ್ತೂರು: ದಿನಾಂಕ 03- 03-2022ರಂದು ಗದಗದಲ್ಲಿ ಗಾನ ಯೋಗಿ ಪುಟ್ಟರಾಜ ಗವಾಯಿಯವರ 108 ನೇ ಜಯಂತ್ಯೋತ್ಸವ ಪ್ರಯುಕ್ತ ಡಾ, ವಿ .ಬಿ ಹಿರೀಮಠ ಮೆಮೊರಿಯಲ್ ಪ್ರತಿಷ್ಠಾನ ವತಿಯಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸೇವೆಗಾಗಿ ಬಾಲ ಪ್ರತಿಭೆಗಳಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಾಲ ಪ್ರತಿಭೆಗಳಾದ ತನ್ವಿ ಶೆಟ್ಟಿ ಸೂರಂಬೈಲು, ಚುಕ್ಕಿ ವಿಟ್ಲ, ಚೈತನ್ಯ ಬಿ.ಎನ್ ಉರುವಾಲು ರವರಿಗೆ ಶ್ರೀ ಪುಟ್ಟರಾಜ ಕಲಾ ಚೇತನ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅದೇ ರೀತಿ ದಿನಾಂಕ 06-04-2022ರಂದು ಕರ್ನಾಟಕ ಜನ ಸ್ಪಂದನ ಟ್ರಸ್ಟ್(ರಿ) ಟಿ .ದಾಸರಹಳ್ಳಿ ಬೆಂಗಳೂರು ಇವರು ಬೆಂಗಳೂರಿನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಹುಮುಖ ಕ್ಷೇತ್ರದ ಸಾಧನೆ ಗಾಗಿ ತನ್ವಿಶೆಟ್ಟಿ ಸೂರಂಬೈಲು. ಚುಕ್ಕಿ ವಿಟ್ಲ. ಚೈತನ್ಯ ಬಿ, ಎನ್ ಉರುವಾಲು ರವರನ್ನು ಜನಸ್ಪಂದನ ಕಲಾಸಿರಿ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುತ್ತೂರು: ಪ್ರೇಮ್ ರಾಜ್ ಆರ್ಲಪದವು ರವರಿಗೆ ಚಂದನ ವರ್ಣ ಕಲಾ ರತ್ನ ರಾಜ್ಯ ಪ್ರಶಸ್ತಿ
- Advertisement -