- Advertisement -
- Advertisement -
ಸ್ನೇಹಿತರೊಂದಿಗೆ ವಸತಿ ಶಾಲೆಯ ಕಾಂಪೌಂಡ್ ಜಿಗಿದು ನೀರಿನ ಹೊಂಡದಲ್ಲಿ ಈಜಲು ಹೋದ 9ನೇ ತರಗತಿಯ ಬಾಲಕ ನೀರು ಪಾಲಾದ ಘಟನೆ ಕೊಪ್ಪಳದ ಕೂಕನೂರು ಪಟ್ಟಣದಲ್ಲಿ ನಡೆದಿದೆ.
ನೀರು ಪಾಲಾದ ಬಾಲಕ ಕುಷ್ಟಗಿ ಮೂಲದ ಪ್ರದೀಪ್ ಎಂದು ಗುರುತಿಸಲಾಗಿದೆ.
ಮಕರ ಸಂಕ್ರಾಂತಿ ಪ್ರಯುಕ್ತ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಯ ನಾಲ್ಕು ಮಕ್ಕಳು ಕಲ್ಲುಕ್ವಾರಿಯಲ್ಲಿ ದೊಡ್ಡದಾಗಿ ಅಗೆದಿರುವ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದರು. ಈ ವೇಳೆ ಮೂವರು ನೀರಿನಲ್ಲಿ ಈಜಾಡಿ ಮೇಲೆ ಬಂದಿದ್ದು, ಪ್ರದೀಪ್ ಹೊಂಡದಲ್ಲಿ ಮುಳುಗಿದ್ದಾನೆ. ಕೂಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬಂದಿ ಆಗಮಿಸಿದ್ದು, ಪೊಲೀಸರ ನೆರವಿನಿಂದ ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
- Advertisement -