- Advertisement -
- Advertisement -
ಹುಟ್ಟಿದ ಮಗು ಹೆಣ್ಣು ಎಂದು ತಿಳಿದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಚರಂಡಿಯಲ್ಲಿ ಬೀಸಾಡಿ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆನೇಕಲ್ ಬಳಿಯ ಚರಂಡಿ ಒಂದರಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಮಗು ಅಳುವ ಶಬ್ದ ಕೇಳಿ ಚರಂಡಿ ಬಳಿ ಹೋಗಿ ನೋಡಿದಾಗ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಕವರ್ನಲ್ಲಿ ಸುತ್ತಿ ಚರಂಡಿ ಮಧ್ಯೆ ಪಾಪಿಗಳು ಎಸೆದು ಹೋಗಿದ್ದಾರೆ. ಶಿಶುವನ್ನು ಹೊರ ತೆಗೆದು ರಕ್ಷಣೆ ಮಾಡಲಾಗಿದೆ. ಇನ್ನು ಮಗು ಬೀಸಾಡಿದ್ದ ವಸ್ತ್ರದಲ್ಲಿ ಆಸ್ಪತ್ರೆಯ ರಶೀದಿ ಪತೆಯಾಗಿದೆ.
ಮಗು ಹುಟ್ಟಿರುವುದು ವಾಣಿ ವಿಲಾಸ ಆಸ್ಪತ್ರೆಯಲ್ಲಿ ತಾಯಿ ಹೆಸರು ಸುಪ್ರಿಯಾ. ತಂದೆ ಶಶಿಧರ್ ಎಂದು ಬರೆಯಲಾಗಿದೆ. ಇಬ್ಬರು ಜಿಗಣಿ ನಿವಾಸಿಗಳು ಎಂಬುವುದು ರಶೀದಿಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೊಲೀಸರು, ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
- Advertisement -