- Advertisement -
- Advertisement -
ಸಾಲಬಾಧೆ ತಾಳಲಾರದೆ ರೈತ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಹಿರೇಕೊಪ್ಪ ಗ್ರಾಮದ ಬಸಯ್ಯ ವೀರಯ್ಯ ಹನಮಸಾಗರಮಠ (55) ಎಂದು ಗುರುತಿಸಲಾಗಿದೆ.
ಬಸಯ್ಯ ವೀರಯ್ಯ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಕೈ ಸಾಲ ಮಾಡಿಕೊಂಡಿದ್ದ, ಗೋವಿನ ಜೋಳ ಬೆಳೆದಿದ್ದ. ಆದರೆ ಬರ ಬಿದ್ದಿರುವ ಕಾರಣ ಜಮೀನಿನಲ್ಲಿ ಬೆಳೆ ಬಂದಿಲ್ಲ. ಹಾಗಾಗಿ ಸಮರ್ಪಕ ಮಳೆ ಇಲ್ಲದೆ ಬೆಳೆ ಬಾರದ ಕಾರಣ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -