Sunday, April 28, 2024
spot_imgspot_img
spot_imgspot_img

ಹೆಂಡತಿಯ ಸೀಮಂತ ಕಾರ್ಯಕ್ರಮದ ಸಂತೋಷದಲ್ಲಿದ್ದ ಪತಿ ಬಸ್‌ನಡಿಗೆ ಬಿದ್ದು ಮೃತ್ಯು

- Advertisement -G L Acharya panikkar
- Advertisement -

ಹೆಂಡತಿಯ ಸೀಮಂತ ಕಾರ್ಯಕ್ರಮದ ಸಂತಸದಲ್ಲಿದ್ದ ಪತಿ ಬಿಎಂಟಿಸಿ ಬಸ್​ನಡಿಗೆ ಸಿಲುಕಿ ಪ್ರಾಣ ಬಿಟ್ಟ ಘಟನೆ ವಿಜಯನಗರದ ಗೋವಿಂದರಾಜ ನಗರದ ಬೈಟು ಕಾಫಿ ಅಂಗಡಿಯ ಬಳಿ ನಡೆದಿದೆ. ಕುಮಾರ್​ ಎಂಬಾತ ಸಾವನ್ನಪ್ಪಿದ್ದಾನೆ.

ಮೃತ ಕುಮಾರ್ ಅನ್ನಪೂರ್ಣೇಶ್ವರಿ ನಗರ ನಿವಾಸಿಯಾಗಿದ್ದು, ಪತ್ನಿಗೆ ಸೀಮಂತ ಮಾಡಬೇಕು ಎಂದು ಮಾರ್ಕೆಟ್​ನಿಂದ ಹೂ ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಬಿಎಂಟಿಸಿ ಬಸ್​ನಡಿಗೆ ಕುಮಾರ್​ ಬಿದ್ದಿದ್ದಾನೆ. ಪರಿಣಾಮ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

ಸದ್ಯ ಬಿಎಂಟಿಸಿ ಚಾಲಕ ಶ್ರೀನಿವಾಸ್​ನನ್ನು ವಿಜಯನಗರ ಸಂಚಾರಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಕುಮಾರ್​ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ.

- Advertisement -

Related news

error: Content is protected !!