Saturday, June 28, 2025
spot_imgspot_img
spot_imgspot_img

ಬೈಕ್ ಸರ್ವೀಸ್ ಗೆ ಬಂದಿದ್ದ ಗ್ರಾಹಕನಿಗೆ ಚೂರಿ ಇರಿದ ಮಾಲೀಕ; ಯುವಕ ಸಾವು..!

- Advertisement -
- Advertisement -

ಬೈಕ್ ಸರ್ವೀಸ್ ಗೆ ಬಂದಿದ್ದ ಯುವಕನೋರ್ವನ ಮೇಲೆ ಶೋರೂಮ್ ಮಾಲೀಕ ಹಲ್ಲೆ ಮಾಡಿರುವ ಘಟನೆ ಕುಶಾಲನಗರದ ಮೈಸೂರು ರಸ್ತೆಯಲ್ಲಿನ ಕೊಡಗಿನ ಮೋಟಾರ್ಸ್ ಬಳಿ ನಡೆದಿದೆ.

ಮೃತಪಟ್ಟ ಯುವಕ ಮಡಿಕೇರಿಯ ಗಣಪತಿ ಬೀದಿ‌ ನಿವಾಸಿ ವೆಲ್ಡರ್ ಸಾಜಿದ್ ( 22) ಹಲ್ಲೆ ಮಾಡಿದ ವ್ಯಕ್ತಿ ಶೋರೂಮ್ ಮಾಲೀಕ ಶ್ರೀನಿಧಿ ಎಂದು ಗುರುತಿಸಲಾಗಿದೆ.

ಸಾಜಿದ್ ಎಂ ಯುವಕ ಕುಶಾಲನಗರದ ಮೈಸೂರು ರಸ್ತೆಯಲ್ಲಿನ ಕೊಡಗನ ಮೋಟಾರ್ಸ್​ಗೆ ಬೈಕ್ ಸರ್ವೀಸ್​ಗೆ ಬಂದಿದ್ದನು. ಈ ವೇಳೆ ಯುವಕ ಮತ್ತು ಶೋರೂಂಮ್ ಮಾಲೀಕ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದರಿಂದ ಮಾಲೀಕನು ಚೂಪಾದ ಆಯುಧದಿಂದ ಯುವಕನ ಎದೆಗೆ ಇರಿದಿದ್ದನು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆ‌ಗೆ ಗಾಯಾಳುವನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Related news

error: Content is protected !!